ಬೆಂಗಳೂರು: ನಂಜನಗೂಡಿನ ನಂಜುಂಡೇಶ್ವರನಿಗೆ ವಿಜಯನಗರ ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರು ಬೆಳ್ಳಿ ಹಾಗೂ ಚಿನ್ನದ ಕವಚ (ಕೊಳಗ) ನೀಡಿ ಹರಕೆ ತೀರಿಸಿದ್ದಾರೆ.
ತಲಾ 4.5 ಕೆಜಿ ತೂಕದ ಚಿನ್ನ ಹಾಗೂ ಬೆಳ್ಳಿಯ ಕವಚ (ಕೊಳಗ)ವನ್ನು ಅರ್ಪಿಸಿ ಹರಕೆ ಸಲ್ಲಿಸಲಾಯಿತು. ಕಳೆದ ಸೋಮವಾರ ಶಾಸಕರ ಕುಟುಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಕೊಳಗ ಅರ್ಪಿಸಿದರು.


