ಬ್ಯಾಂಕಾಕ್: ಶುಕ್ರವಾರದಂದು (ಮಾ. 28) ಮ್ಯಾನ್ಮಾರ್ ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪಕ್ಕೆ ಆ ದೇಶ ನಲುಗಿದೆ. ರಾಜಧಾನಿ ಬ್ಯಾಂಕಾಕ್ ಸೇರಿದಂತೆ ಹಲವಾರು ನಗರಗಳಲ್ಲಿ ಭೂಕಂಪ ತನ್ನ ಕರಾಳ ನರ್ತನ ಮಾಡಿದೆ. ಅನೇಕ ಕಟ್ಟಡಗಳು ಧರೆಗುರುಳಿವೆ. ಅನೇಕ ರಸ್ತೆಗಳು ಹಾಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ನೂರಾರು ಜನರು ಗಾಯಗೊಂಡಿದ್ದು ಸಂಜೆ 4 ಗಂಟೆಯ ಹೊತ್ತಿಗೆ ಲಭ್ಯವಾದ ಮಾಹಿತಿಯಂತೆ 23 ಜನರು ಸಾವಿಗೀಡಾಗಿದ್ದಾರೆ.
ಮ್ಯಾನ್ಮಾರ್ ರಾಜಧಾನಿಯಾದ ಬ್ಯಾಂಕಾಕ್ ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಯು ಅಲ್ಲಿರುವ ಭಾರತೀಯರಿಗಾಗಿ ಸಹಾಯ ಹಸ್ತ ಚಾಚಿದೆ. ತುರ್ತು ಸಹಾಯವಾಣಿಗಳನ್ನು ತೆರೆಯಲಾಗಿದ್ದು ಅಲ್ಲಿರುವ ಭಾರತೀಯರಿಗೆ ಭೂಕಂಪದಿಂದ ಏನಾದರೂ ಸಮಸ್ಯೆಯಾಗಿದ್ದರೆ ಕೂಡಲೇ ಸಂಪರ್ಕಿಸುವಂತೆ ಕೋರಲಾಗಿದೆ. ಮತ್ತೊಂದೆಡೆ, ಕರ್ನಾಟಕ ರಾಜ್ಯ ಸರ್ಕಾರ ಕೂಡಲೇ ಅಲ್ಲಿರುವ ಧೂತವಾಸ ಕಚೇರಿಯನ್ನು ಸಂಪರ್ಕಿಸಿ ಅಲ್ಲಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ವಿಚಾರಿಸಿದೆ. ಕನ್ನಡಿಗರಿಗಾಗಲೀ, ಭಾರತೀಯರಿಗಾಗಲೀ ತೊಂದರೆಯಾಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅಲ್ಲಿನ ಧೂತಾವಾಸ ಕಚೇರಿಯು ತಿಳಿಸಿದೆ. ಅಲ್ಲಿರುವ ಕನ್ನಡಿಗರಿರುವ ಪ್ರದೇಶಗಳಲ್ಲಿಯೂ ಭೂಕಂಪ ಸಂಭವಿಸಿದೆಯಾದರೂ ಯಾರಿಗೂ ಸಾವು ನೋವು ಆಗಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
A very scary scene is coming out from Bangkok. A building constructed at the cost of crores collapsed in a few seconds due to the earthquake. #earthquake #bangkokearthquakepic.twitter.com/7W3TkUggaX
— Satya Prakash (@_SatyaPrakash08) March 28, 2025
ಮತ್ತೊಂದೆಡೆ, ಮ್ಯಾನ್ಮಾರ್ ನಲ್ಲಿರುವ ಮಹೇಶ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿ ಕನ್ನಡಿಗರ ತಂಡವೊಂದು ಪ್ರವಾಸಕ್ಕೆ ಹೋಗಿದ್ದು ಭೂಕಂಪದಿಂದಾಗಿ ತಾವೊಂದು ಸುರಕ್ಷಿತ ಸ್ಥಳದಲ್ಲಿರುವುದಾಗಿ ಹೇಳಿದ್ದಾರೆ. ಪೊಲೀಸರು ತಮ್ಮ ತಂಡವನ್ನು ರಕ್ಷಿಸಿ ಸುರಕ್ಷಿತ ಕಟ್ಟಡವೊಂದಕ್ಕೆ ಸ್ಥಳಾಂತರಿಸಿದ್ದಾರೆ. ನಾವಿಲ್ಲಿ ಸೇಫ್ ಆಗಿದ್ದೇವೆ ಎಂದು ಹೇಳಿದ್ದಾರೆ.
JUST IN: Fire and heavy damage at Mandalay University in Myanmar, reports of casualties pic.twitter.com/zgcogKCJvt
— BNO News (@BNONews) March 28, 2025
ಮ್ಯಾನ್ಮಾರ್ ನಲ್ಲಿ ಸಂಭವಿಸಿರುವ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ಅದು ಸುತ್ತಲಿನ 1,200 ಕಿ.ಮೀ. ದೂರದವರೆಗೆ ಅಂದರ ಕಂಪನಿಗಳ ಹರಡಿದ್ದವು ಎಂದು ಅಲ್ಲಿನ ಭೂವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿಯೇ, ಮ್ಯಾನ್ಮಾರ್ ಅಕ್ಕಪಕ್ಕದ ದೇಶಗಳಾದ ಬಾಂಗ್ಲಾದೇಶ, ಚೀನಾ, ಥಾಯ್ಲೆಂಡ್ ಹಾಗೂ ಭಾರತದ ಈಶಾನ್ಯ ರಾಜ್ಯಗಳಲ್ಲಿಯೂ ಭೂಮಿ ಕಂಪನಿಸಿದೆ. ಆದರೆ, ಈ ಭೂಕಂಪದ ಕೇಂದ್ರ ಬಿಂದು ಮ್ಯಾನ್ಮಾರ್ ನ ರಾಜಧಾನಿ ಬ್ಯಾಂಕಾಂಕ್ ಆಗಿತ್ತೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
Whole Bangkok shook like Crazy! #Bangkok #earthquake pic.twitter.com/99v7ySZDGc
— Srushti Gopani (@DrSrushtiG) March 28, 2025
ಭೂಕಂಪದಿಂದಾಗಿ ಥಾಯ್ಲೆಂಡ್ ನಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಅಲ್ಲಿನ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಅಲ್ಲಿಯೂ ಪ್ರಬಲವಾದ ಭೂಕಂಪ ಸಂಭವಿಸಿದೆ. ಅನೇಕ ಕಟ್ಟಡಗಳು ಧರೆಗುರುಳಿವೆ. ಅನೇಕ ರಸ್ತೆಗಳು ಹಾಳಾಗಿವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ನಷ್ಟವಾಗಿದೆ. ಕಟ್ಟಡಗಳು ಉರುಳಿದ್ದರಿಂದಾಗಿ ಮೂವರು ಸಾವಿಗೀಡಾಗಿದ್ದು ಸುಮಾರು 90 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವ ಫುಮ್ತಮ್ ವೆಕಾಯಾಚಿ ತಿಳಿಸಿದ್ದಾರೆ.


