Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಯಿಂದಲೇ ಬೆಂಗಳೂರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡಲು ನಕಾರ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.
ಹೌದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಯಿಂದಲೇ ಸರ್ವೆಗೆ ನಕಾರ ಕೇಳಿ ಬಂದಿದೆ. ಸಮೀಕ್ಷೆಗೆ ಹೋದ್ರೆ ಮನೆ ಬಾಗಿಲನ್ನೇ ತೆಗೆಯದೇ ಮೌದ್ಗಿಲ್ ನಕಾರ ವ್ಯಕ್ತ ಪಡಿಸಿರೋದಾಗಿ ಹೇಳಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೌನೀಶ್ ಮೌದ್ಗಿಲ್ ಗಣತಿದಾರರು ಸಮೀಕ್ಷೆಗಾಗಿ ಮನೆಗೆ ತೆರಳಿದರೂ ಭಾಗಿಲು ತೆಗೆದಿಲ್ಲ. ಮೂರು ಬಾರಿ ಬೆಲ್ ಮಾಡಿ, ಕಾಲ್ ಮಾಡಿದ್ರೂ ಮೌದ್ಗಿಲ್ ಹೊರಗೆ ಬಂದಿಲ್ಲ. ಮನೆ ಬಳಇ ಮೂರು ಬಾರಿ ಹೋದರೂ ಮಾಹಿತಿ ನೀಡಲು ಮೌದ್ಗಿಲ್ ನಕಾರ ವ್ಯಕ್ತಪಡಿಸಿದ್ದಾರೆ. ಮೆಸೇಜ್ ಮಾಡಿದ್ರೂ ಪ್ರತಿಕ್ರಿಯಿಸುತ್ತಿಲ್ಲ ಅಂತ ಅಪ್ ಡೇಟ್ ಮಾಡಲು ಉತ್ತರಿಸಿದ್ದಾರೆ ಎನ್ನಲಾಗಿದೆ.


