ಬೆಂಗಳೂರು: ಹೊಸ ವಿದ್ಯುತ್ ಕನೆಕ್ಷನ್ ನೀಡಲು 21 ಸಾವಿರ ರೂಪಾಯಿ ಲಂಚ ಪಡೆದಿದ್ದ ಬೆಸ್ಕಾಂ ಇಂಜಿನಿಯರ್ ರಮೇಶ್ ಎಂಬುವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.
ರಮೇಶ್ ಅವರು ಲಗ್ಗೆರೆಯ ಎನ್4 ಬೆಸ್ಕಾಂ ಉಪವಿಭಾಗದಲ್ಲಿ ಇಂಜಿನಿಯರ್ ಆಗಿದ್ದರು. ಪೀಣ್ಯದ ಕಟ್ಟಡವೊಂದಕ್ಕೆ ವಿದ್ಯುತ್ ಕನೆಕ್ಷನ್ ನೀಡಲು 21 ಸಾವಿರ ರೂ. ಲಂಚ ಪಡೆದಿದ್ದರು. ಗುತ್ತಿಗೆದಾರನಿಂದ ಲಂಚ ಪಡೆದಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ನ್ಯೂಸ್ ಫಸ್ಟ್ ಚಾನೆಲ್ ವರದಿ ಮಾಡಿತ್ತು.
ವರದಿಯ ಬೆನ್ನಲ್ಲೆ ಎಚ್ಚೆತ್ತ ಬೆಸ್ಕಾಂ ಇಂಜಿನಿಯರ್ ರಮೇಶ್ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.


