BBMP
Loading ...

ಬರೊಡ

ಬೆಂಗಳೂರು: ಬ್ಯಾಂಕ್ ಆಫ್​ ಬರೋಡಾದ ಕಾಮಾಕ್ಷಿ ಪಾಳ್ಯ ಶಾಖೆಯಲ್ಲಿ ಇಂದು (ಜುಲೈ 19) 118ನೇ ಸಂಸ್ಥಾಪನಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಂಸ್ಥಾಪನಾ ದಿನದ ಸಂಭ್ರಮವು ಬ್ಯಾಂಕ್ ಆಫ್​ ಬರೋಡಾದ ಕಾಮಾಕ್ಷಿ ಪಾಳ್ಯ ಶಾಖೆಯಲ್ಲೇ ನಡೆಯಿತು. ಕಚೇರಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಬ್ಯಾಂಕ್​ ಸಿಬ್ಬಂದಿ ಹಾಗೂ ಗ್ರಾಹಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದು ಒಂದು ಸಂಸ್ಥೆಯನ್ನು ಪ್ರತಿನಿಧಿಸುವ ಪಯಣವಾಗಿದ್ದು, ಮೌಲ್ಯಗಳು ಹಾಗೂ ಜನರ ಆಚರಣೆ. ಯಾವುದೇ ಸಂದರ್ಭದಂತೆ, ಅಂತಹ ಆಚರಣೆಯನ್ನು ಅತ್ಯಂತ ಪ್ರಮುಖ ಮತ್ತು ಪ್ರೀತಿಯ ಜನರೊಂದಿಗೆ ಉತ್ತಮವಾಗಿ ಆನಂದಿಸಲಾಯಿತು.

ಬ್ಯಾಂಕ್​ನ ಕ್ರೆಡಿಟ್​ ಡಿಪಾರ್ಟ್​ಮೆಂಟ್​ ಹೆಡ್​ ಹಾಗೂ ಸಹಾಯಕ ವ್ಯವಸ್ಥಾಪಕರಾದ ವಸಂತ್​ ಕುಮಾರ್​ ಹಾಗೂ ಬ್ಯಾಂಕಿನ ಗೌರವಾನ್ವಿತ ಗ್ರಾಹಕರಾದ ಆನಂದ್​ ಎಲೆಕ್ಟ್ರಿಕಲ್​ನ ಮಾಲೀಕರಾದ ವೈ.ಎಚ್​. ಆನಂದ್​ ಹಾಗೂ ವಿ ಆರ್​ ಇಂಡಸ್ಟ್ರೀಸ್​ನ ಮಾಲೀಕರಾದ ವಿಶ್ವನಾಥ್​​ ರೆಡ್ಡಿ ಭಾಗವಹಿಸಿ ಸಂಭ್ರಮದ ಮೆರಗನ್ನು ಹೆಚ್ಚಿಸಿದರು.

ಬೆಂಗಳೂರಲ್ಲಿ ಆಟೋ ಮೀಟರ್ ಕನಿಷ್ಠ ದರ 36 ರೂ. ಹೆಚ್ಚಳ ಮಾಡಿ ಅಧಿಕೃತ ಆದೇಶ: ಆಗಸ್ಟ್ 1 ರಿಂದಲೇ ಜಾರಿ

Leave a Reply

Your email address will not be published. Required fields are marked *