ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದ ಕಾಮಾಕ್ಷಿ ಪಾಳ್ಯ ಶಾಖೆಯಲ್ಲಿ ಇಂದು (ಜುಲೈ 19) 118ನೇ ಸಂಸ್ಥಾಪನಾ ದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಂಸ್ಥಾಪನಾ ದಿನದ ಸಂಭ್ರಮವು ಬ್ಯಾಂಕ್ ಆಫ್ ಬರೋಡಾದ ಕಾಮಾಕ್ಷಿ ಪಾಳ್ಯ ಶಾಖೆಯಲ್ಲೇ ನಡೆಯಿತು. ಕಚೇರಿಯನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಾಚರಣೆ ಮಾಡಲಾಯಿತು. ಈ ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದು ಒಂದು ಸಂಸ್ಥೆಯನ್ನು ಪ್ರತಿನಿಧಿಸುವ ಪಯಣವಾಗಿದ್ದು, ಮೌಲ್ಯಗಳು ಹಾಗೂ ಜನರ ಆಚರಣೆ. ಯಾವುದೇ ಸಂದರ್ಭದಂತೆ, ಅಂತಹ ಆಚರಣೆಯನ್ನು ಅತ್ಯಂತ ಪ್ರಮುಖ ಮತ್ತು ಪ್ರೀತಿಯ ಜನರೊಂದಿಗೆ ಉತ್ತಮವಾಗಿ ಆನಂದಿಸಲಾಯಿತು.

ಬ್ಯಾಂಕ್ನ ಕ್ರೆಡಿಟ್ ಡಿಪಾರ್ಟ್ಮೆಂಟ್ ಹೆಡ್ ಹಾಗೂ ಸಹಾಯಕ ವ್ಯವಸ್ಥಾಪಕರಾದ ವಸಂತ್ ಕುಮಾರ್ ಹಾಗೂ ಬ್ಯಾಂಕಿನ ಗೌರವಾನ್ವಿತ ಗ್ರಾಹಕರಾದ ಆನಂದ್ ಎಲೆಕ್ಟ್ರಿಕಲ್ನ ಮಾಲೀಕರಾದ ವೈ.ಎಚ್. ಆನಂದ್ ಹಾಗೂ ವಿ ಆರ್ ಇಂಡಸ್ಟ್ರೀಸ್ನ ಮಾಲೀಕರಾದ ವಿಶ್ವನಾಥ್ ರೆಡ್ಡಿ ಭಾಗವಹಿಸಿ ಸಂಭ್ರಮದ ಮೆರಗನ್ನು ಹೆಚ್ಚಿಸಿದರು.
ಬೆಂಗಳೂರಲ್ಲಿ ಆಟೋ ಮೀಟರ್ ಕನಿಷ್ಠ ದರ 36 ರೂ. ಹೆಚ್ಚಳ ಮಾಡಿ ಅಧಿಕೃತ ಆದೇಶ: ಆಗಸ್ಟ್ 1 ರಿಂದಲೇ ಜಾರಿ


