ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಇಂದು ಬಂಧಿಸಲಾಗಿದೆ. ಡಿಸೆಂಬರ್ 4ರಂದು ಪುಷ್ಪಾ-2 ಸಿನಿಮಾ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲುತುಳಿತದಿಂದ ಸಾವನ್ನಪ್ಪಿದ್ದರು. ಹೈದ್ರಾಬಾದ್ ಸಂಧ್ಯಾ ಥಿಯೇಟರ್ಗೆ ಯಾವುದೇ ಸುರಕ್ಷತೆ ಕ್ರಮ ಇಲ್ಲದೇ ನಟ ಅಲ್ಲು ಅರ್ಜುನ್ ಬಂದಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದಕ್ಕೆ ನೇರವಾಗಿ ಅಲ್ಲು ಅರ್ಜುನ್ ಕಾರಣ ಎಂದು ಮೃತ ರೇವತಿ ಪತಿ ದೂರು ನೀಡಿದ ಬೆನ್ನಲ್ಲೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಹಾಗೂ ಇನ್ನಿತರ ವಿರುದ್ಧ ದೂರು ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನಟನಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅಲ್ಲು ಅರ್ಜುನ್ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಇಂದು ಪೊಲೀಸರು ಅವರನ್ನು ಬಂಧಿಸಿದ್ದಾರೆ.
ನಟ ಥಿಯೇಟರ್ ವಿಸಿಟ್ ವೇಳೆ ಯಾವುದೇ ಸುರಕ್ಷತೆ ಕ್ರಮ ಕೈಗೊಂಡಿರಲಿಲ್ಲ. ಏಕಾಏಕಿ ನಟ ಥಿಯೇಟರ್ಗೆ ವಿಸಿಟ್ ಮಾಡಿದ್ದರು. ಹೀಗಾಗಿ ಕಾಲ್ತುಳಿತದಿಂದ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಇದರಿಂದ ಕೆಲವು ವ್ಯಕ್ತಿಗಳು ಕಂಪ್ಲೇಂಟ್ ಕೊಟ್ಟಿದ್ದರು. ಭದ್ರತೆ ಕ್ರಮ ಇಲ್ಲದೆ ನಟ ಥಿಯೇಟರ್ಗೆ ಬಂದಿದ್ದೇ ತಪ್ಪು. ಹೈದ್ರಾಬಾದ್ ಸಂಧ್ಯಾ ಥಿಯೇಟರ್ಗೆ ಅಲ್ಲು ಅರ್ಜುನ್ ಬಂದಿಲ್ಲ ಅಂದರೆ ಈ ಘಟನೆ ನಡೆಯುತ್ತಿರಲಿಲ್ಲ. ಸುರಕ್ಷತೆ ಕ್ರಮ ಇಲ್ಲದೆ ಥಿಯೇಟರ್ಗೆ ಬಂದಿದ್ದು ತಪ್ಪು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಆಧಾರದ ಮೇಲೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಡಿಸೆಂಬರ್ 5 ರಂದು ವಿಶ್ವದಾದ್ಯಂತ ಪುಷ್ಪಾ-2 ರಿಲೀಸ್ ಆಗಿತ್ತು. ಈ ವೇಳೆ ಅಲ್ಲು ಅರ್ಜುನ್ ಥಿಯೇಟ್ ಬಳಿ ಹೋಗಿದ್ದರು. ಆಗ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಏಕಾಏಕಿ ಮುಂದಾಗಿದ್ದರಿಂದ ನೂಕುನುಗ್ಗಲು ಆಗಿದೆ. ಯಾವುದೇ ಮಾಹಿತಿ ನೀಡದೇ ಸುರಕ್ಷತೆ ಕ್ರಮ ಇಲ್ಲದೇ ಥಿಯೇಟರ್ ನಟ ವಿಸಿಟ್ ಮಾಡಿದ್ದು ತಪ್ಪು ಅವರು ಥಿಯೇಟರ್ಗೆ ಬಂದಿದ್ದರಿಂದ ಮಹಿಳೆ ಸಾವಾಗಿದೆ ಎಂದು ಮಹಿಳೆಯ ಪತಿ ದೂರು ನೀಡಿದ್ದರಿಂದ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ಪ್ರಕಟ: ಜನಸಾಮಾನ್ಯರಿಗೆ ತಿಳಿಯಬೇಕು ಎಂದ ಹೈಕೋರ್ಟ್!


