ಬೆಂಗಳೂರು: ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ಶಿವಾನಂದ ಅಡಿವಪ್ಪ ಮೆಣಸಿನಕಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಾನಂದ ಅಡಿವಪ್ಪ ಅವರು ಧಾರವಾಡದ ಕೆಲಗೇರಿ ರಸ್ತೆಯ ಕೆ.ಎಚ್.ಬಿ ಕಾಲನಿ ನಿವಾಸಿ. ಸದಸ್ಯರಾಗಿ ಸ್ಥಾನ ಪಡೆದ ಅಡಿವಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಾರ್ಯಕಾರಿ ಸಮಿತಿ ಸದಸ್ಯರು ಬೆಂಗಳೂರು ಹಾಗೂ ಬಾಗಲಕೋಟೆಯ ಕರ್ನಾಟಕ ರಾಜ್ಯ ಭೂ ಸಂರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷರು ಮತ್ತು ಸಾಯಿ ಎಲೆಕ್ಟ್ರಿಕಲ್ ಪ್ರೋಪರೇಟರ್ ಮುಧೋಳ ಮಹೇಶ ಮತ್ತು ಅವರ ಕುಟುಂಬ ಶುಭ ಕೋರಿದೆ.



