ಕಲಬುರಗಿ: ಫೋನ್ ಪೇ ಮೂಲಕ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಪಿಡಿಒ. ಕವಲಗಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ರಾಜ್ ಬಲೆಗೆ ಬಿದ್ದ ಪಿಡಿಒ.
ಕವಲಗಾ ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ಗುರುಸಿದ್ದಯ್ಯ ಎಂಬುವವರು ನೀಡಿದ್ದ ದೂರು ಆಧಾರಿಸಿ ಕ್ರಮ ಜರುಗಿಸಿದ ಲೋಕಾಯುಕ್ತ ಪೊಲೀಸರು.
ಪ್ರಕರಣದ ಹಿನ್ನೆಲೆ
ಕವಲಗಾ ( ಬಿ). ಗ್ರಾಮ ಪಂಚಾಯತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್,.ಪಂಪ್ ಆಪರೇಟರ್ ರನ್ನು ಕರ್ತವ್ಯಕ್ಕೆ ಮರು ನೇಮಕಗೊಳಿಸಲು ಹಾಗೂ ಆರು ತಿಂಗಳ ವೇತನ ಮಂಜೂರು ಮಾಡಲು ಒಟ್ಟು .17.000/- ರೂಪಾಯಿಗಳನ್ನು ಫೋನ್ ಪೇ ಲಂಚ.ಪಡೆದುಕೊಂಡಿದ್ದರು. ಈ ಸಂಬಂಧ ಗುರುಸಿದ್ದಯ್ಯ , ಲೋಕಾಯುಕ್ತ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಲಂಚದ ಹಣವನ್ನು ಫೋನ್ ಪೇ ಮೂಲಕ ಪಡೆಯುವಾಗ ವಶಕ್ಕೆ ಪಡೆದರು.
ಕಲಬುರಗಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ. ಇನ್ಸ್ಪೆಕ್ಟರ್ ಅರುಣ್ ಕುಮಾರ್ ತಂಡದಿಂದ ಕಾರ್ಯಚರಣೆ.
ದರ್ಶನ್, ಪವಿತ್ರಾ ಗೌಡ ಎಸ್ಕೇಪ್: ಅನುಕುಮಾರ್, ಜಗದೀಶ್ಗೆ ಜಾಮೀನು ಸಿಕ್ಕರೂ ಶ್ಯೂರಿಟಿ ಕೊಡುವವರಿಲ್ಲ


