ಬೆಂಗಳೂರು: ನೂತನ ಅಧಿಕಾರ ಪಡೆದ ಕಾಂಗ್ರೆಸ್ ನಾಯಕರಾದ ಪುಟ್ಟಸ್ವಾಮಿಗೌಡ, ಡಾ. ಕೆ.ಟಿ.ರಾಜು ಹಾಗೂ ಮಹಾದೇವ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಪುಟ್ಟಸ್ವಾಮಿಗೌಡ ಅವರು ಬಿಡಿಎ ಸದಸ್ಯರಾಗಿ ನೇಮಕವಾಗಿದ್ದರೆ, ಡಾ ಕೆ.ಟಿ.ರಾಜು ಅವರು ಬೆಂಗಳೂರು ಉತ್ತರ ಭೂ ನ್ಯಾಯಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ. ಮಹಾದೇವ ನಾಯ್ಕ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನೇಮಕವಾಗಿದ್ದಾರೆ.

ಈ ಮೂವರಿಗೂ ಬೆಂಗಳೂರಿನ ಕಿಂಗ್ಸ್ ಕ್ಲಬ್ನಲ್ಲಿ ಅಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮೈಸೂರು ಪೇಟ ತೊಡಿಸಿ, ಸಾಲು ಹೊದೆಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಸಹ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿರುವ ಎಸ್.ಕೆ. ಮೋಹನ್ ರಾಮ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.



