ಬೆಂಗಳೂರು : ರಾಜ್ಯದಲ್ಲಿ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ಮಳೆಯು ಬೆಸ್ಕಾಂಗೆ ದೊಡ್ಡ ಹೊಡೆತ ಕೊಟ್ಟಿದ್ದು, ವರುಣಾಘಾತಕ್ಕೆ ಕೋಟಿ ಕೋಟಿ ನಷ್ಟವಾಗಿದೆ.
ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭದ ನಂತರ ಕಳೆದ ಎರಡು (ಏಪ್ರಿಲ್ ಮತ್ತು ಮೇ) ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ 1,581 ವಿದ್ಯುತ್ ಕಂಬಗಳು ಧರೆಗುರುಳಿವೆ ಮತ್ತು 229 ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದ್ದು, 5 ಕೋಟಿ ರೂ. ನಷ್ಟವಾಗಿದೆ.
ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭದ ನಂತರ ಕಳೆದ ಎರಡು (ಏಪ್ರಿಲ್ ಮತ್ತು ಮೇ) ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ 1,581 ವಿದ್ಯುತ್ ಕಂಬಗಳು ಧರೆಗುರುಳಿವೆ ಮತ್ತು 229 ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದ್ದು, 5 ಕೋಟಿ ರೂ. ನಷ್ಟವಾಗಿದೆ.
ಸುಮಾರು 1.46 ಲಕ್ಷ ಕಿ.ಮೀ. ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಸಾಕಷ್ಟು ಕಡೆ ವಿದ್ಯುತ್ ತಂತಿಗಳು ತುಂಡಾಗಿವೆ. ಹೊಸದಾಗಿ ವಿದ್ಯುತ್ ತಂತಿ ಅಳವಡಿಕೆಗೆ 1.02 ಕೋಟಿ ರೂ. ವ್ಯಯಿಸಲಾಗಿದೆ. 46 ಎರಡು ಕಂಬಗಳ ಸ್ಟ್ರಕ್ಚರ್(ಡಿ.ಪಿ) ಹಾನಿಯಾಗಿದ್ದು, ಇವುಗಳ ದುರಸ್ತಿಗೆ ಸುಮಾರು 15 ಲಕ್ಷ ರೂ. ಖರ್ಚು ಮಾಡಲಾಗಿದೆ.
ವಿದ್ಯುತ್ ಉಪಕರಣ ಹೆಚ್ಚುವರಿ ದಾಸ್ತಾನು:
ಮಳೆಯಿಂದ ಹಾನಿಗೊಳಗಾಗುವ ವಿದ್ಯುತ್ ಕಂಬ, ತಂತಿಗಳು, ಟ್ರಾನ್ಸ್ಫಾರ್ಮರ್ ಸೇರಿದಂತೆ ಇತರೆ ವಿದ್ಯುತ್ ಉಪಕರಣಗಳನ್ನು ತಕ್ಷಣವೇ ಬದಲಿಸಲು ಬೆಸ್ಕಾಂ ಸುಸ್ಥಿತಿಯಲ್ಲಿರುವ ಹೆಚ್ಚುವರಿ ವಿದ್ಯುತ್ ಉಪಕರಣಗಳನ್ನು ದಾಸ್ತಾನು ಮಾಡಿದೆ. ಜನರಿಂದ ದೂರು ಬಂದ ತಕ್ಷಣ ಹಾಳಾದ ಕಂಬ, ತಂತಿ ಹಾಗೂ ಟ್ರಾನ್ಸ್ಫಾರ್ಮರ್ಗಳನ್ನು ಬದಲಿಸಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಲಾಗುತ್ತಿದೆ.
ಮರ, ಕೊಂಬೆ ತೆರವಿಗೆ ಕ್ರಮ:
ಮಳೆ ಮತ್ತು ಗಾಳಿ ಅಬ್ಬರದ ಬೆನ್ನಲ್ಲೇ, ರಸ್ತೆಗಳ ಇಕ್ಕೆಲಗಳಲ್ಲಿ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಪರಿವರ್ತಕಗಳಿಗೆ ತಗಲುವಂತಿರುವ ಮರ, ರೆಂಬೆ ಕೊಂಬೆಗಳ ತೆರವಿಗೆ ಬೆಸ್ಕಾಂ ಮುಂದಾಗಿದೆ. ಮುಖ್ಯ ರಸ್ತೆಗಳು, ಜನವಸತಿ ಪ್ರದೇಶಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಗಿರುವ ವಿದ್ಯುತ್ ಮಾರ್ಗದಲ್ಲಿನ ಕೊಂಬೆಗಳು, ಒಣಗಿದ ಮರಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ತೆರವು ಕಾರ್ಯ ನಡೆದಿದ್ದರೂ, ಮುಂಗಾರು ಆರಂಭವಾಗಿರುವುದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ತೆರವು ಮಾಡುವಂತೆ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ರಾಜಧಾನಿಯಲ್ಲಿ ಹೆಚ್ಚು ನಷ್ಟ:
2022-23 ನೇ ಹಣಕಾಸು ವರ್ಷದಲ್ಲಿ ಮಳೆ ಗಾಳಿಯಿಂದ ಬೆಸ್ಕಾಂಗೆ 25.52 ಕೋಟಿ ರೂ., 2023-24 ರಲ್ಲಿ 15.22 ಕೋಟಿ ರೂ. ಮತ್ತು 2024-25 ರಲ್ಲಿ 30.20 ಕೋಟಿ ರೂ. ನಷ್ಟವಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಸ್ಕಾಂ ವ್ಯಾಪ್ತಿಯ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಮಳೆಯಿಂದ ಬೆಸ್ಕಾಂಗೆ ಹೆಚ್ಚಿನ ನಷ್ಟವಾಗಿದೆ. 210 ವಿದ್ಯುತ್ ಕಂಬಗಳು ಮತ್ತು 132 ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದ್ದು, 1.96 ಕೋಟಿ ರೂ. ನಷ್ಟವಾಗಿದೆ.
ಜಿಲ್ಲೆ ನಷ್ಟ (ರೂ.ಗಳಲ್ಲಿ)
* ಬೆಂಗಳೂರು ನಗರ 1.96 ಕೋಟಿ
* ಬೆಂಗಳೂರು ಗ್ರಾಮಾಂತರ 37.85 ಲಕ್ಷ
* ರಾಮನಗರ 76.70 ಲಕ್ಷ
* ಕೋಲಾರ 54.02 ಲಕ್ಷ
* ತುಮಕೂರು 40.79 ಲಕ್ಷ
* ದಾವಣಗೆರೆ 43.29 ಲಕ್ಷ
* ಚಿಕ್ಕಬಳ್ಳಾಪುರ 13.66 ಲಕ್ಷ
* ಚಿತ್ರದುರ್ಗ 25.47 ಲಕ್ಷ
19,000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ: ರೈತರಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ಸರ್ಕಾರ!


