BBMP
Loading ...

Greater Bengaluru News9 : ನಗರದಲ್ಲಿ ಅನೇಕ ಭಾಗಗಳಲ್ಲಿ ಒಂದಲ್ಲ ಒಂದು ಕೆಲಸಕ್ಕೆಂದು ಜೆಸಿಬಿ ಮೂಲಕ ರಸ್ತೆ ಅಗೆಸುವುದು ಸಾಮಾನ್ಯವಾಗಿಬಿಟ್ಟಿದೆ. ಒಂದು ಸಲ ನೀರಿನ ಪೈಪ್‌ಗಾಗಿ, ಮತ್ತೊಂದು ಸಲ ವಿದ್ಯುತ್‌ ಲೈನ್‌, ಮಗದೊಂದು ಸಲ ಚರಂಡಿ ರಿಪೇರಿಗೆ..ಹೀಗೆ ಒಂದಲ್ಲ ಒಂದು ಕೆಲಸದ ನೆಪದಲ್ಲಿ ರಸ್ತೆಗಳನ್ನ ಅಗೆಯಲಾಗುತ್ತದೆ. ಆದರೆ ಇದರಿಂದ ಆಗುವ ಎಡವಟ್ಟುಗಳು ಒಂದೆರಡಲ್ಲ. ಹಾಗೇ, ಇದೀಗ ಬೆಸ್ಕಾಂನಿಂದ ಮಾಡಲಾಗಿದ್ದ ಎಡವಟ್ಟಿನಿಂದ ಕಾವೇರಿ ನೀರಿನ ಪೈಪ್‌ಲೈನ್‌ ಹಾಳಾಗಿತ್ತು.

ಹುಳಿಮಾವು ಬಳಿಯ ಬಿಡಿಎ ಲೇಔಟ್‌ನಲ್ಲಿ ಶನಿವಾರ ಬೆಳಗ್ಗೆ ಸುಮಾರು 8ಗಂಟೆಗೆ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದಾದ ಮೇಲೆ ರಿಪೇರಿಗಾಗಿ ಬೆಸ್ಕಾಂ ಸಿಬ್ಬಂದಿ ಆಗಮಿಸಿದ್ದರು. ಅಲ್ಲೆಲ್ಲ ಇರುವುದು ಭೂಗತ ವಿದ್ಯುತ್‌ ಕೇಬಲ್.‌ ಈ ಕೇಬಲ್‌ನ್ನ ದುರಸ್ತಿ ಮಾಡಿಸುವ ಸಲುವಾಗಿ ರಸ್ತೆ ಅಗೆಯಲಾಯಿತು. ಆದರೆ ಅಲ್ಲಿ, ಇನ್ನೊಂದು ಸಮಸ್ಯೆ ಆಗಿತ್ತು. ವಿದ್ಯುತ್‌ ಲೈನ್‌ ದುರಸ್ತಿ ಮಾಡಲು ಬಂದಿದ್ದ ಬೆಸ್ಕಾಂ ಸಿಬ್ಬಂದಿ ಕಾವೇರಿ ನೀರಿನ ಸಂಪರ್ಕದ ಪೈಪ್‌ಲೈನ್‌ ಕಟ್‌ ಮಾಡಿದ್ದರು.

ನೀರು ಸರಬರಾಜು ಇರ್ಲಿಲ್ಲ..
ಕಾವೇರಿ ನೀರಿನ ಪೈಪ್‌ಲೈನ್‌ ಕಟ್‌ ಆಗಿದ್ದರಿಂದ, ಅಲ್ಲಿಂದ ನೀರು ಹೋಗುತ್ತಿದ್ದ ಏರಿಯಾಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರೇ ಇರಲಿಲ್ಲ. ವಿದ್ಯುತ್‌ ಕೇಬಲ್‌ ದುರಸ್ತಿ ಮಾಡಲಾಯಿತು..ಬೆಳಗ್ಗೆ 11.30ರ ಹೊತ್ತಿಗೆ ವಿದ್ಯುತ್‌ ಕೂಡ ಪೂರೈಕೆ ಆಗಿತ್ತು. ಆದರೆ ಹಲವು ಮನೆಗಳಿಗೆ ನೀರು ಪೂರೈಕೆ ಇರದಂತಾಯ್ತು. ಅಕ್ಷಯನಗರದ ಆಕ್ಸಿಸ್ ಅಂತರಾ ಅಪಾರ್ಟ್‌ಮೆಂಟ್‌ಗಳ 20 ಮನೆಗಳಿಗೆ ನೀರು ಸರಬರಾಜು ಇರಲಿಲ್ಲ. ವಿದ್ಯುತ್ ಲೈನ್ ಅನ್ನು ಪ್ರವೇಶಿಸಲು ಮಣ್ಣು ತೆಗೆಯುವ ಯಂತ್ರವು ಕಾವೇರಿ ಪೈಪ್‌ಲೈನ್ ಮುರಿದು ಹಾಕಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಾರಕ್ಕೆ ಎರಡು ಬಾರಿ ಈ ಪ್ರದೇಶಕ್ಕೆ ನೀರು ಪೂರೈಸುವ 4 ಇಂಚಿನ ಕಾವೇರಿ ಪೈಪ್‌ಲೈನ್ ಗೆ ಹಾನಿಯಾಗಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗೆದ ಪ್ರದೇಶದ ಗೋಡೆಯನ್ನು ರಾತ್ರಿ 10 ಗಂಟೆಗೆ ಸರಿ ಪಡಿಸಲಾಯಿತು. ಮಧ್ಯರಾತ್ರಿಯ ಸುಮಾರಿಗೆ ಪೈಪ್‌ಲೈನ್ ಗೆ ತೇಪೆ ಹಾಕಲಾಯಿತು. ದುರಸ್ತಿ ನಂತರ, ಮನೆಗಳಿಗೆ ನೀರು ಸರಬರಾಜು ಪುನರಾರಂಭವಾಯಿತು.

ಸದ್ಯ ಬೆಂಗಳೂರಿನಾದ್ಯಂತ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್‌ನಿಂದ ಮುಂಗಾರು ಪೂರ್ವ ನಿರ್ವಹಣಾ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದೆ. ಮಳೆಗಾಲ ಶುರುವಾದ್ಮೇಲೆ ಗುಡುಗು ಮತ್ತು ಭಾರಿ ಮಳೆಯಿಂದ ಹಾನಿಗೆ ಒಳಗಾಬಹುದಾದ ಲೈನ್‌ಗಳ ಬದಲಾವಣೆ, ಕಟ್‌ ಆಗಬಹುದಾದ ವಿದ್ಯುತ್‌ ತಂತಿಗಳ ದುರಸ್ತಿ ಮತ್ತಿತರ ಕಾರ್ಯಗಳನ್ನ ಮಾಡುತ್ತಿದೆ. ಇನ್ನು ಅನೇಕ ಕಡೆಗಳಲ್ಲಿ ವಿದ್ಯುತ್‌ ತಂತಿಗೆ ತಗುಲಬಹುದಾದ ಮರಗಳನ್ನ ಕೂಡ ಟ್ರಿಮ್‌ ಮಾಡಲಾಗುತ್ತಿದೆ. ಭೂತಗ ಕೇಬಲ್‌ಗಳ ದುರಸ್ತಿ ಕಾರ್ಯಕ್ಕಾಗಿ ರಸ್ತೆಗಳನ್ನ ಅಗೆಯಲಾಗಿದೆ. ಹಳೇ ವಿದ್ಯುತ್‌ ಕಂಬಗಳನ್ನ ಬದಲಿಸಲಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ವಿದ್ಯುತ್‌ ತಂತಿಗಳಿಗೆ ಹಾನಿ ಮಾಡಬಹುದಾದ ದೊಡ್ಡ ಮರಗಳನ್ನ ಟ್ರಿಮ್‌ ಮಾಡಲು ಬಿಬಿಎಂಪಿ ಸಹಾಯ ಪಡೆಯುತ್ತಿದೆ.

ಬೆಸ್ಕಾಂನಿಂದ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿರುವ ಹಿನ್ನೆಲೆ ವಿದ್ಯುತ್‌ ವ್ಯತ್ಯಯವೂ ಆಗುತ್ತಿದೆ. ಯಾವ ಕೆವಿ ಫೀಡರ್‌ಗಳ ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿದೆಯೋ, ಆ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದೆ. ಹಾಗೇ, ಬೆಸ್ಕಾಂ ಈ ಬಗ್ಗೆ ಮುಂಚಿತವಾಗಿಯೇ ತಿಳಿಸುತ್ತಿದೆ. ಇನ್ನು..ಯಾವುದೇ ಏರಿಯಾದಲ್ಲಿ ವಿದ್ಯುತ್‌ ಸಮಸ್ಯೆ ಕಂಡುಬಂದಲ್ಲಿ ದೂರು ಸಲ್ಲಿಸುವಂತೆ ತಮ್ಮ ಟ್ವಿಟರ್‌, ಫೇಸ್‌ಬುಕ್‌ ಖಾತೆಯ ಲಿಂಕ್‌ ಕೂಡ ನೀಡಿದೆ.

Leave a Reply

Your email address will not be published. Required fields are marked *