BBMP
Loading ...

BESCOM

ಬೆಂಗಳೂರು: ಇಂಧನ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಬೆಸ್ಕಾಂ, ಮಿತ ವಿದ್ಯುತ್‌ ಬಳಕೆಯ ಬಿಎಲ್‌ಡಿಸಿ ಫ್ಯಾನ್‌ಗಳನ್ನು ಗುರುವಾರ ಲೋಕಾರ್ಪಣೆಗೊಳಿಸಿದೆ.

ಬ್ಯೂರೋ ಆಫ್‌ ಎನರ್ಜಿ ಎಫಿಷಿಯನ್ಸಿ (ಬಿಇಇ) ಮತ್ತು ಕ್ರೆಡಲ್‌ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಲ್‌ಡಿಸಿ ಸೀಲಿಂಗ್‌ ಫ್ಯಾನ್‌ ಬಿಡುಗಡೆಗೊಳಿಸಿ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ಶಿವಶಂಕರ್‌, ” ಬೇಸಿಗೆ ಆರಂಭದಲ್ಲೇ ಬಿಎಲ್‌ಡಿಸಿ ಫ್ಯಾನ್‌ಗಳನ್ನು ಬಿಡುಗಡೆಗೊಳಿಸಿ ಬಳಕೆಗೆ ಗ್ರಾಹಕರನ್ನು ಉತ್ತೇಜಿಸಲಾಗುತ್ತಿದೆ. ಸಾಮಾನ್ಯ ಫ್ಯಾನ್‌ಗಳಿಗಿಂತ ಅತಿ ಕಡಿಮೆ ವಿದ್ಯುತ್‌ ಬಳಸುವಂತೆ ಈ ಫ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ,” ಎಂದರು.

”ವಿದ್ಯುತ್‌ ಬೇಡಿಕೆ ಕಡಿಮೆಗೊಳಿಸುವ ಈ ಪ್ರಯತ್ನವು ಗ್ರಾಹಕರ ವಿದ್ಯುತ್‌ ವೆಚ್ಚವನ್ನೂ ಕಡಿಮೆ ಮಾಡಲಿದೆ. ಸುಸ್ಥಿರ ಹಾಗೂ ಇಂಧನ ದಕ್ಷತೆಯ ಭವಿಷ್ಯಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ. ಇಂಧನ ದಕ್ಷತೆಯೆಡೆಗಿನ ನಮ್ಮ ಪ್ರಯತ್ನವು ಪಾಲುದಾರರ ಸಹಕಾರವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ. ವಿದ್ಯುತ್‌ ಬಳಕೆಯಲ್ಲಿ ಜಾಗೃತಿ ಮತ್ತು ಸುಸ್ಥಿರ ನಾಳೆಗಾಗಿ ಒಂದಾಗಿ ನಡೆಯಬೇಕಿದೆ,” ಎಂದು ಹೇಳಿದರು.

ವಿದ್ಯುತ್‌ ಸಂರಕ್ಷಣೆ-ದಕ್ಷತೆ ನೀತಿ
ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, ”ವಿದ್ಯುತ್‌ ಉತ್ಪಾದನೆ ಎಷ್ಟು ಮುಖ್ಯವೋ ಅದನ್ನು ಸಂರಕ್ಷಿಸುವುದೂ ಅಷ್ಟೇ ಮುಖ್ಯ,” ಎಂದರು.

ಶೇಕಡಾ 50ರಷ್ಟು ವಿದ್ಯುತ್‌ ಉಳಿತಾಯ
”ಸದ್ಯ ಬಳಕೆಯಲ್ಲಿರುವ ಹಳೆಯ ತಂತ್ರಜ್ಞಾನದ ಫ್ಯಾನ್‌ಗಳಿಗೆ ಹೋಲಿಸಿದರೆ ಬಿಎಲ…ಡಿಸಿ ಫ್ಯಾನ್‌ ಬಳಕೆಯಿಂದ ಶೇ.50ರಷ್ಟು ವಿದ್ಯುತ್‌ ಬಳಕೆ ತಗ್ಗಲಿದೆ,” ಎಂದು ಪಿಡಬ್ಲ್ಯೂಸಿ ಭಾರತದ ಕ್ಲೀನ್‌ ಎನರ್ಜಿ ವಿಭಾಗದ ಮುಖ್ಯಸ್ಥ ರಾಜೀವ್‌ ರಲ್ಹಾನ್‌ ಸಂತಸ ವ್ಯಕ್ತಪಡಿಸಿದರು. ಇಇಎಸ್‌ಎಲ್‌ ರಾಜ್ಯ ಮುಖ್ಯಸ್ಥ ದೀಪಕ್‌ ಸಹನಿ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್‌.ಜೆ.ರಮೇಶ್‌, ಪ್ರಧಾನ ವ್ಯವಸ್ಥಾಪಕ (ಡಿಎಸ್‌ಎಂ) ವಿ.ಎಸ್‌.ರಮೇಶ್‌ ಹಾಜರಿದ್ದರು.

ಬಿಎಲ್‌ಡಿಸಿ ಫ್ಯಾನ್‌ ಖರೀದಿ ಹೇಗೆ?
ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಬೆಸ್ಕಾಂನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕಚೇರಿ ಮತ್ತು ಬೆಸ್ಕಾಂ ಅಧಿಕೃತ ಜಾಲತಾಣದಲ್ಲಿನ ಇಇಎಸ್‌ಎಲ್‌ ಲಿಂಕ್‌ https://eeslmart.in/fan?affiliateid=13285 ಅಥವಾ eeslmart.in ವೆಬ್‌ಸೈಟ್‌ ಮೇಲೆ ಕ್ಲಿಕ್‌ ಮಾಡುವ ಮೂಲಕ ಆನ್‌ಲೈನ್‌ಲ್ಲಿಫ್ಯಾನ್‌ ಖರೀದಿಸಬಹುದು. 5 ಸ್ಟಾರ್‌ ಪ್ರಮಾಣೀಕೃತ ಬಿಎಲ್‌ಡಿಸಿ ಸೀಲಿಂಗ್‌ ಫ್ಯಾನ್‌ನ ಬೆಲೆ 2,699 ರೂ. ಇದೆ.

ಕೊಳವೆ ಬಾವಿಗಳಿಗೆ ವಿದ್ಯುತ್‌
ರೈತರು ಕೃಷಿ ಬಳಕೆಗಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿಳಂಬ ಮಾಡಬಾರದೆಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಅಂತರ್ಜಲ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಕಾಲವಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ನೀರಿನ ಅಭಾವದ ಕಾರಣ ತುರ್ತಾಗಿ ವಿದ್ಯುಚ್ಛಕ್ತಿ ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ, ನೋಂದಣಿ ಪ್ರಮಾಣ ಪತ್ರವನ್ನು ನೀಡುವ ವಿಧಾನವನ್ನು ಸರಳೀಕರಿಸಬೇಕು. ಜಿಲ್ಲಾಅಂತರ್ಜಲ ಕಚೇರಿಯಲ್ಲಿಅರ್ಜಿ ಶುಲ್ಕ ಮತ್ತು ದಂಡ ಪಾವತಿಸಿ ಸ್ವೀಕೃತಿ ಪತ್ರ ಪಡೆದು ಬೆಸ್ಕಾಂ ಕಚೇರಿಗೆ ಸಲ್ಲಿಸಿ ವಿದ್ಯುಚ್ಛಕ್ತಿ ಪಡೆಯಲು ಹಾಗೂ ತದನಂತರ ನೋಂದಣಿ ಪ್ರಮಾಣ ಪತ್ರ ಪಡೆದುಕೊಳ್ಳಲು ರೈತರಿಗೆ ಅನುವು ಮಾಡಿಕೊಡಬೇಕು ಎಂದರು.

ಆಸ್ತಿ ಖರೀದಿಸುವವರೇ ಗಮನಿಸಿ: ನೋಂದಣಿ ನಿಯಮದಲ್ಲಿ ಆಗಿದೆ ಈ ಮಹತ್ವದ ಬದಲಾವಣೆ.!

Leave a Reply

Your email address will not be published. Required fields are marked *