BBMP
Loading ...

BBMP Lokayukta

ಬೆಂಗಳೂರು: ಪ್ರಸ್ತುತ ದಿನಗಳಲ್ಲಿಸರಕಾರಿ ಅಧಿಕಾರಿಗಳ ಲಂಚಗುಳಿತನ ಅಂಕೆಗೆ ಸಿಗದಂತಾಗಿದೆ. ಬಿಬಿಎಂಪಿಯಲ್ಲಂತೂ ಲಂಚ ಕೊಡದೆ ಯಾವುದೇ ಕೆಲಸವಾಗುವುದಿಲ್ಲವೆಂಬ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗುತ್ತಿಗೆದಾರನಿಂದ 10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿರುವ ಬಿಬಿಎಂಪಿಯ ಸಿ.ವಿ.ರಾಮನ್‌ನಗರ ವಿಭಾಗದ ಕಾಧಿರ್ಯ ಧಿನಿಧಿರ್ವಾಧಿಹಕ ಎಂಜಿನಿಯರ್‌ ಎಚ್‌.ವಿ.ಯರಪ್ಪರೆಡ್ಡಿಗೆ ಜಾಮೀನು ನೀಡಲು ತಿರಸ್ಕರಿಸಿರುವ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ, ಪಾಲಿಕೆಯಲ್ಲಿತಾಂಡವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡೇ ವಾರದಲ್ಲಿ 6ಕ್ಕೂ ಹೆಚ್ಚು ಮಂದಿ ಲಾಕ್
ಆರೋಪಿ ಎಚ್‌.ವಿ.ಯರಪ್ಪ ರೆಡ್ಡಿಯ ಜಾಮೀನು ಅರ್ಜಿ ವಜಾ ಆದೇಶದಲ್ಲಿಸರಕಾರಿ ವ್ಯವಸ್ಥೆಯಲ್ಲಿನ ಭಾರಿ ಭ್ರಷ್ಟಾಚಾರ, ಅವ್ಯವಸ್ಥೆ ಕುರಿತಂತೆ ಕಟುವಾಗಿ ಟೀಕಿಸಿದ್ದಾರೆ. ಕೇವಲ ಎರಡು ವಾರಗಳಲ್ಲಿ 6ಕ್ಕೂ ಹೆಚ್ಚು ಮಂದಿ ಬಿಬಿಎಂಪಿ ಎಂಜಿನಿಯರ್‌ಗಳು ಲಂಚ ಪಡೆಯುವಾಗಲೇ ಸಿಕ್ಕಿಬಿದ್ದಿದ್ದಾರೆ. ಪಾಲಿಕೆಯಲ್ಲಿಅವ್ಯಾಹತವಾಗಿರುವ ಲಂಚಾವತಾರಕ್ಕೆ ಇದು ಸಾಕ್ಷಿಯಾಗಿದೆ. ಅಧಿಕಾರಿಗಳ ಭ್ರಷ್ಟಾಚಾರದಿಂದ ಧ್ವನಿಯಿಲ್ಲದವರು, ದುರ್ಬಲರು ಹಾಗೂ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

”ಸರಕಾರಿ ವಲಯದಲ್ಲಿಭ್ರಷ್ಟಾಚಾರವೆಂಬುದು ‘ಪ್ಲೇಗ್‌’ ಮಾದರಿಯಲ್ಲಿ ದಿನದಿಂದ ದಿನಕ್ಕೆ ಹರಡುತ್ತಿದ್ದು, ನಿಯಂತ್ರಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಅಧಿಕಾರಿಗಳ ಲಂಚದಾಸೆಯಿಂದ ಸಾಮಾನ್ಯ ನಾಗರಿಕರು ಹೈರಾಣಾಗಿದ್ದಾರೆ. ಕ್ಯಾನ್ಸರ್‌ನಂತೆ ಸಮಾಜವನ್ನು ಭಾದಿಸುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ಪೀಳಿಗೆಗೆ ವ್ಯವಸ್ಥೆಯ ಮೇಲೆ ಭರವಸೆಯೇ ಇಲ್ಲದಂತಾಗುತ್ತದೆ,’ಧಿ’ ಎಂದು ನ್ಯಾಯಾಧೀಶರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆರೋಪಿ ಅಧಿಕಾರಿಯು 10 ಲಕ್ಷ ರೂ. ಲಂಚ ಪಡೆದಿರುವುದಕ್ಕೆ ಪ್ರಾಸಿಕ್ಯೂಶನ್‌ ಪೂರಕ ದಾಖಲೆಗಳನ್ನು ಒದಗಿಸಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಹಂತದಲ್ಲಿಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಕಾಮಗಾರಿಯ ಬಿಲ್‌ ಬಿಡುಗಡೆಗೆ ಗುತ್ತಿಗೆದಾರರ ಬಳಿ 10 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಎಚ್‌.ವಿ.ಯರಪ್ಪರೆಡ್ಡಿ ಅವರನ್ನು ಜೂ.18ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಸಿ.ವಿ.ರಾಮನ್‌ನಗರ ವ್ಯಾಪ್ತಿಯಲ್ಲಿಪಾಲಿಕೆಯ ಹಲವು ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರ ಜಿ.ಎಂ.ಹೇಮಂತ್‌ ಅವರಿಗೆ ಬಿಲ್‌ ಪಾವತಿಸಬೇಕಿತ್ತು. ಬಿಲ್‌ ಬಿಡುಗಡೆಗಾಗಿ ಕಧಿಡತ ವರ್ಗಾಯಿಸಲು 10 ಲಕ್ಷ ರೂ. ಲಂಚ ನೀಡುವಂತೆ ಹೇಮಂತ್‌ ಬಳಿ ಯರಪ್ಪ ರೆಡ್ಡಿ ಬೇಡಿಕೆ ಇಟ್ಟಿದ್ದರು.

ಈ ಕುರಿತು ಹೇಮಂತ್‌ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ದೂರುದಾರರಿಂದ 10 ಲಕ್ಷ ರೂ. ಲಂಚ ಪಡೆಯುತ್ತಿರುವಾಗಲೇ ಕಾರ್ಯಾಚರಣೆ ನಡೆಸಿ ಯರಪ್ಪ ರೆಡ್ಡಿಯನ್ನು ಬಂಧಿಸಿದ್ದರು. ಸದ್ಯ, ಆರೋಪಿ ಯರಪ್ಪರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಜು.8ರಂದು ಕರ್ತವ್ಯಕ್ಕೆ ಸಾಮೂಹಿಕ ರಜೆ
ಬಿಬಿಎಂಪಿ ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳ ಅಧಿಕಾರಿ, ನೌಕರರು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.8ರಂದು ಕರ್ತವ್ಯಕ್ಕೆ ಸಾಮೂಹಿಕ ರಜೆ ಹಾಕಿ ಫ್ರೀಡಂಪಾರ್ಕ್ನಲ್ಲಿಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 10 ಮಹಾನಗರ ಪಾಲಿಕೆಗಳು ಹಾಗೂ ಬಿಬಿಎಂಪಿ ಅಧಿಕಾರಿ, ನೌಕರರು ಸೇವೆ ಸ್ಥಗಿತಗೊಳಿಸಿ ಮುಷ್ಕರದಲ್ಲಿಪಾಲ್ಗೊಳ್ಳುತ್ತಿದ್ದಾರೆ. ಸ್ವಚ್ಛತಾ ಕಾರ್ಯವೂ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್‌ನ ರಾಜ್ಯಾಧ್ಯಕ್ಷ ಎ.ಅಮೃತ್‌ರಾಜ್‌ ತಿಳಿಸಿದ್ದಾರೆ.

ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರುವಂತೆಯೇ 7ನೇ ವೇತನ ಆಯೋಗದ ಸೌಲಭ್ಯವನ್ನು ಮಹಾನಗರ ಪಾಲಿಕೆಗಳ ನೌಕರರಿಗೂ ವಿಸ್ತರಿಸಿ, ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಬೇಕು. ಕೆಜಿಐಡಿ, ಜಿಪಿಎಫ್‌, ಜ್ಯೋತಿ, ಆರೋಗ್ಯ ಸಂಜೀವಿನಿ ಸೌಲಭ್ಯ ಜಾರಿಗೊಳಿಸಬೇಕು,’’ ಎಂದು ಅಧಿವಧಿರು ಆಗ್ರಹಿಸಿದ್ದಾರೆ.

ಬೆಸ್ಕಾಂ ಟೆಂಪರರಿ ಕನೆಕ್ಷನ್ ಪಡೆದವರ ಬವಣೆ: ಸರ್ಕಾರ ಆದಷ್ಟು ಬೇಗ ತೋರಬೇಕಿದೆ ಕರುಣೆ..!

Leave a Reply

Your email address will not be published. Required fields are marked *