Greater Bengaluru News9: ಭಾರತದ ರಾಜಕೀಯ ಭೂಪಟದಲ್ಲಿ ಮಹತ್ವದ ಬದಲಾವಣೆ ತರಬಲ್ಲ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. ಪಶ್ಚಿಮ ಬಂಗಾಳದ ದೀದಿಯ ಭದ್ರಕೋಟೆ ಉಳಿಯುವುದೇ? ತಮಿಳುನಾಡಿನ ದ್ರಾವಿಡ ರಾಜಕಾರಣದ ಮುಂದಿನ ಹಾದಿ ಯಾವುದು? ಕೇರಳದಲ್ಲಿ ಇತಿಹಾಸ ಮರುಕಳಿಸುವುದೇ ಅಥವಾ ಬದಲಾವಣೆಯ ಗಾಳಿ ಬೀಸುವುದೇ? ಅಸ್ಸಾಂ ಮತ್ತು ಪುದುಚೇರಿಯ ಗದ್ದುಗೆ ಯಾರ ಪಾಲಾಗಲಿದೆ? ಮತಯಂತ್ರಗಳಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ ಇಂದು ಅನಾವರಣಗೊಳ್ಳಲಿದೆ. ಕ್ಷಣ ಕ್ಷಣದ ನಿಖರ ಅಪ್ಡೇಟ್ಗಳಿಗಾಗಿ ನಮ್ಮ ಲೈವ್ ಅಪ್ಡೇಟ್ಸ್ ವೀಕ್ಷಿಸಿ.


