BBMP
Loading ...

DK Shivakumar

Greater Bengaluru News9 : ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ 2 ತಿಂಗಳ ಬಳಿಕ ಸಂಪುಟ ವಿಸ್ತರಣೆ ಆಗಿದ್ದು, ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲಿ 33 ಸಚಿವರಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರ್ಯಾರಿಗೆ ಯಾವ ಖಾತೆ ನೀಡಲಾಗಿದೆ ಎನ್ನುವ ಕಂಪ್ಲೀಟ್ ಲಿಸ್ಟ್​.

ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್​ ಆಗಿದ್ದು, ಪಟ್ಟಿ ಸಿಎಂ ಇಲಾಖೆ ತಲುಪಿದೆ.

  • ಚಲುವರಾಯಸ್ವಾಮಿ-ಕೃಷಿ ಇಲಾಖೆ
  • ರಿಜ್ವಾನ್ – ಆಹಾರ ಇಲಾಖೆ
  • ಮುನಿಯಪ್ಪ – ಸಮಾಜ ಕಲ್ಯಾಣ
  • ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
  • ಬಸಂತಪ್ಪ- ಮೀನುಗಾರಿಕೆ ಇಲಾಖೆ
  • ಮಧು ಬಂಗಾರಪ್ಪ – ಪ್ರಾಥಮಿಕ-ಪ್ರೌಢಶಾಲೆ ಶಿಕ್ಷಣ
  • ರಾಯರೆಡ್ಡಿ- ಉನ್ನತ ಶಿಕ್ಷಣ
  • ಜಮೀರ್- ಹೌಸಿಂಗ್ ವಕ್ಪ್
  • ಸವದಿ – ಸಹಕಾರಿ ಲಾಖೆ
  • ಅಜಯ್ ಸಿಂಗ್ -ಆರಣ್ಯ ಇಲಾಖೆ
  • ಮಲ್ಲಿಕಾರ್ಜುನ – ಗಣಿ ಇಲಾಖೆ
  • ಬಾಲಕೃಷ್ಣ- ಸಣ್ಣ ನೀರಾವರಿ
  • ಪುಟ್ಟರಂಗ ಶೆಟ್ಟಿ – ಪಶು ಸಂಗೋಪನೆ

ಹೀಗೆ ಡಿಕೆ ಶಿವಕುಮಾರ್‌ ನೇತೃತ್ವದ ಸರ್ಕಾರದಲ್ಲಿನ 2ನೇ ಹಂತದ ಸಂಪುಟ ವಿಸ್ತರಣೆ ಬಳಿಕ ಪ್ರಮಾಣ ವಚನ ಸ್ವೀಕರಿಸಿದ 19 ಸಚಿವರ ಪೈಕಿ ಇದೀಗ 13 ಜನರಿಗೆ ಖಾತೆ ಹಂಚಿಕೆಯಾಗಿದೆ. ಇನ್ನುಳಿದಂತೆ ಸಚಿವ ಬಿ.ನಾಗೇಂದ್ರ, ರುದ್ರಪ್ಪ ಲಮಾಣಿ, ಶಿವರಾಜ್‌ ತಂಗಡಗಿ, ವಿಜಯಪ್ಪ ಕಾಶಪ್ಪನವರ್‌, ನರೇಂದ್ರ ಸ್ವಾಮಿ, ಟಿ. ರಘುಮೂರ್ತಿ ಅವರಿಗೆ ಯಾವುದೇ ಖಾತೆ ಹಂಚಿಕೆ ಮಾಡಲಾಗಿದೆ. ಆದಾಗ್ಯೂ, ಇಂದೇ ಇವರಿಗೂ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದ್ದು, 11ಗಂಟೆ ವೇಳೆಗೆ ಅಧಿಕೃತ ಹೊರಬರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ,

ಕ್ಯಾಬಿನೆಟ್‌ ವಿಸ್ತರಣೆ ಬಳಿಕ ಮಂತ್ರಿಗಿರಿ ಕೈತಪ್ಪಿದ ಶಾಸಕರಲ್ಲಿ ಅಸಮಾಧಾನ ಒಂದೆಡೆಯಾದರೆ, ಇನ್ನೊಂದೆಡೆ ಖಾತೆ ಹಂಚಿಕೆ ಗೊಂದಲ. ಹೀಗೆ ಕ್ಯಾಬಿನೆಟ್‌ ವಿಸ್ತರಣೆಯಾಗಿ ಬರೋಬ್ಬರಿ 10 ದಿನಗಳ ಬಳಿಕ ಕೊನೆಗೆ ಡಿಕೆ ಶಿವಕುಮಾರ್‌ ನೇತೃತ್ವದ ಸಂಪುಟಕ್ಕೆ ವೇಗ ಸಿಕ್ಕಿದ್ದು, ಸಚಿವರಿಗೆ ಖಾತೆ ಹಂಚಿಕೆ ಹಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇನ್ನೇನಿದ್ದರೂ ಈ ಸಚಿವರು ತಮ್ಮ ಜವಾಬ್ದಾರಿಯನ್ನು ಕೈಗೆತ್ತಿಗೊಂಡು ಕಾರ್ಯಪ್ರವೃತ್ತರಾಗಬೇಕಿದೆ.

Leave a Reply

Your email address will not be published. Required fields are marked *