Greater Bengaluru News9 : ಇಂದು ನಗರದ ವಿವಿಧ ಭಾಗದಲ್ಲಿ ವಿದ್ಯುತ್ ಸಮಸ್ಯೆ (Power Cut)ಎದುರಾಗಿದೆ. ನಿವಾಸಿಗಳು ಈ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದು, ಬೆಸ್ಕಾಂ (BESCOM) ವಿರುದ್ಧ ಕಿಡಿ ಕಾರಿದ್ದಾರೆ. ಇಂದು ಮುಂಜಾನೆಯಿಂದಲೇ ಈ ಸಮಸ್ಯೆ ಎದುರಾಗಿದೆ. ಹಲವು ಭಾಗಗಳಲ್ಲಿ ದೀರ್ಘಕಾಲದ ವಿದ್ಯುತ್ ಕಡಿತಗೊಂಡ ಬಗ್ಗೆ ವರದಿಯಾಗಿದೆ.
ಎಚ್ಎಸ್ಆರ್ ಲೇಔಟ್ ಸೆಕ್ಟರ್ 4, ಅರೆಕೆರೆ, ವಿಜಯ ಬ್ಯಾಂಕ್ ಲೇಔಟ್ ಮತ್ತು ಆನೇಕಲ್-ಚಂದಾಪುರ ರಸ್ತೆ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಬೆಸ್ಕಾಂ ಅನ್ನು ಟ್ಯಾಗ್ ಮಾಡಿ, ವಿದ್ಯುತ್ ಸರಬರಾಜು ತಕ್ಷಣ ಮರುಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.
ಬೆಳಗಿನ ಜಾವ 3:15 ರ ಸುಮಾರಿಗೆ ನಿವಾಸಿಯೊಬ್ಬರು ಬೆಳಗಿನ ಜಾವ 1 ಗಂಟೆಯಿಂದ ವಿದ್ಯುತ್ ಇಲ್ಲ ಎಂದು ಪೋಸ್ಟ್ ಮಾಡಿದ್ದು, ಈ ಸಮಸ್ಯೆ ಬಹುತೇಕ ದಿನನಿತ್ಯದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ದಕ್ಷಿಣ ಬೆಂಗಳೂರಿನ ನಿವಾಸಿಗಳ ಮೇಲೆ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿರುವ ಬಗ್ಗೆ ಬಳಕೆದಾರರು ಹತಾಶೆ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಎಚ್ಎಸ್ಆರ್ ಲೇಔಟ್ ಸೆಕ್ಟರ್ 4 ರ ಮತ್ತೊಬ್ಬ ನಿವಾಸಿ, ಮೇ 17 ರಂದು ರಾತ್ರಿ 9 ಗಂಟೆಯಿಂದ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬೆಳಗಿನ ಜಾವ 3 ಗಂಟೆಯಾದರೂ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಗಿಲ್ಲ ಎಂದು ದೂರಿದ್ದಾರೆ. ಹಲವಾರು ಬಳಕೆದಾರರು ಚರ್ಚೆಯಲ್ಲಿ ಭಾಗವಹಿಸಿ ಪುನಃಸ್ಥಾಪನೆ ಕಾರ್ಯದ ಕುರಿತು ನವೀಕರಣಗಳನ್ನು ಕೇಳಿದರು.
ದೂರುಗಳಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ, ಸಮಸ್ಯೆಯನ್ನು ಸಂಬಂಧಪಟ್ಟ ಉಪವಿಭಗಕ್ಕೆ ತಿಳಿಸಲಾಗಿದೆ ಮತ್ತು ವಿದ್ಯುತ್ ಸರಬರಾಜು ಆದಷ್ಟು ಬೇಗ ಮರುಸ್ಥಾಪಿಸಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದೆ. ಆನೇಕಲ್-ಚಂದಾಪುರ ರಸ್ತೆಯಿಂದಲೂ ದೂರುಗಳು ಬಂದಿವೆ.ಅಲ್ಲಿ ರಾತ್ರಿಯಿಡೀ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ನಿವಾಸಿಗಳು ವರದಿ ಮಾಡಿದ್ದಾರೆ. ನಂತರ ಬೆಸ್ಕಾಂ ದೂರು ದಾಖಲಿಸಲಾಗಿದೆ ಮತ್ತು ಕ್ರಮಕ್ಕಾಗಿ ಸಂಬಂಧಪಟ್ಟ ಉಪವಿಭಾಗ ಕಚೇರಿಗೆ ಕಳುಹಿಸಲಾಗಿದೆ ಎಂದು ದೃಢಪಡಿಸಿತು.
ಬೆಸ್ಕಾಂ ದೂರುಗಳನ್ನು ತ್ವರಿತವಾಗಿ ನೋಂದಾಯಿಸುವುದು ಹೇಗೆ?
ಇನ್ನು ಸಾಕಷ್ಟು ಕಡೆ ವಿದ್ಯುತ್ ಸಮಸ್ಯೆ ಉಂಟಾದರೂ ನಿವಾಸಿಗಳಿಗೆ ಹೇಗೆ ಇದನ್ನು ಸರಿ ಮಾಡಿಸುವುದು ಅನ್ನೋದು ತಿಳಿದಿಲ್ಲ. ಆದರೆ ಬೆಸ್ಕಾ ವಿವಿಧ ರೀತಿಯಲ್ಲಿ ನಿಮ್ಮ ದೂರನ್ನು ಸ್ವೀಕಾರ ಮಾಡಿ ಪರಿಹಾರ ನೀಡಲಿದೆ. ಗ್ರಾಹಕರು ಫೇಸ್ಬುಕ್ (@Namma Bescom – ನಮ್ಮ ಬೆಸ್ಕಾಂ) ಹಾಗೂ X (Twitter) (@Namma Bescom) ಮೂಲಕ ಸಂಪರ್ಕಿಸಬಹುದು. ಇದರೊಂದಿಗೆ ಜಿಲ್ಲಾವಾರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳನ್ನೂ ಸಹ ಕಳುಹಿಸಬಹುದು.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ, ಬಹು ಸಹಾಯವಾಣಿ ಸಂಖ್ಯೆಗಳನ್ನು ಒದಗಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ರಾಮನಗರ ಜಿಲ್ಲೆಗಳಿಗೆ ಪ್ರತ್ಯೇಕ ಸಂಪರ್ಕಗಳು ಲಭ್ಯವಿದೆ. ಹೆಚ್ಚುವರಿಯಾಗಿ, ಬೆಸ್ಕಾಮ್ನ 24×7 ಸಹಾಯವಾಣಿ (1912) ತಕ್ಷಣದ ಸಹಾಯಕ್ಕಾಗಿ ಸಕ್ರಿಯವಾಗಿದೆ.
ಕೊಂಬೆಗಳು ಕಟ್
ಕಳೆದ ವಾರದಲ್ಲಿ ಬಿದ್ದ ಭಾರೀ ಮಳೆಗೆ ಬೆಂಗಳೂರು ಸುಸ್ತಾಗಿ ಹೋಗಿತ್ತು. ಎಲ್ಲೆಡೆ ಮರದ ಕೊಂಬೆಗಳು ಬಿದ್ದಿದ್ದು, ಇದರಿಂದ ವಿದ್ಯುತ್ ಸಂಪರ್ಕ ಸಹ ಕಟ್ ಆಗಿತ್ತು. ಅಷ್ಟು ಮಾತ್ರವಲ್ಲೆ ವಿದ್ಯುತ್ ಲೈನ್ಗಳು ಹಾಗೂ ಕಂಬಗಳ ನೆಲಕ್ಕೆ ಬಿದ್ದಿದ್ದವು. ಇವುಗಳನ್ನೆಲ್ಲಾ ಶೀಘ್ರದಲ್ಲೇ ಸರಿಪಡಿಸಲಾಗಿದ್ದು, ಈಗ ಮರದ ಕೊಂಬೆಗಳನ್ನು ಕಟ್ ಮಾಡುವ ಕೆಲಸ ನಡೆಯುತ್ತಿದೆ.
ಸಾಕಷ್ಟು ಕಡೆ ಬೆಸ್ಕಾಂ ಲೈನ್ಗೆ ಹಾಗೂ ಸವಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಬಾಗಿಕೊಂಡಿರುವ ಅಥವಾ ಬೀಳುವ ಹಂತದಲ್ಲಿ ಇರುವ ಮರದ ಕೊಂಬೆಗಳನ್ನು ತುಂಡರಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳನ್ನು ತಪ್ಪಿಸುವ ಕೆಲಸವನ್ನು ಜಿಬಿಎ ಮಾಡುತ್ತಿದೆ.
Respected Sir/Madam,
— Namma BESCOM | ನಮ್ಮ ಬೆಸ್ಕಾಂ (@NammaBESCOM) May 18, 2026
In reference to your post, regarding the Issue , we have informed once again to the concerned sub division AE Mohan 9449866797 and issue will be resolved at the earliest.
Inconvenience regretted.
With Regards,
Jayanth K
BESCOM Helpline
(1912)


