Greater Bengaluru News9: ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿಗೆ ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯಡಿ ಬೆವಿಕಂ ನಿಯಮಗಳನ್ನು ಉಲಂಘಿಸಿ ನಿಯಮವಾಹಿರವಾಗಿ 09 ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕಂಪನಿಗೆ ಆರ್ಥಿಕ ನಷ್ಟ ಉಂಟುಮಾಡಿದ ರಾಮನಗರ ಗ್ರಾಮಾಂತರ ಉಪ ವಿಭಾಗದ ಕಿರಿಯ ಇಂಜಿನಿಯರ್ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಕಾಶ್ ಅಕ್ರಮದ ಬಗ್ಗೆ ಗ್ರೇಟರ್ ಬೆಂಗಳೂರು ನ್ಯೂಸ್ 9 ವರದಿ ಮಾಡಿತ್ತು, ಇದರ ಬೆನ್ನಲ್ಲೆ ತನಿಖೆ ನಡೆಸಿ, ಅಕ್ರಮ ಸಾಬೀತಾದ ಬೆನ್ನಲ್ಲೇ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಕಾಶ್ ಅವರು ಬೆಸ್ಕಾಂ ಕಂಪನಿಯ ಸುಮಾರು 9 ವಿದ್ಯುತ್ ಕಂಬಗಳನ್ನು ಹಾಕಿ, ಒಂದು ಎಸ್ಎಸ್ಪಿ ಅಥವಾ ಬೋರ್ವೆಲ್ ಕನೆಕ್ಷನ್ ಕೊಟ್ಟಿದ್ದಾರೆ. ಕಾನೂನಿನ ಪ್ರಕಾರ, ಶೀಘ್ರ ಸಂಪರ್ಕ ಯೋಜನೆಗೆ ಸುಮಾರು 100 ಮೀಟರ್ಗಳ ಅಂತರ ಇರಬೇಕು. ಎರಡು ಬೋರ್ವೆಲ್ಗಳು ಇರಬೇಕು ಹಾಗೂ ಪ್ರತ್ಯೇಕ ಓನರ್ಗಳು ಇರಬೇಕು ಮತ್ತು ಎರಡು ಸರ್ವೆ ನಂಬರ್ಗಳು ಇರಬೇಕು. ಆದರೆ, ಇಲ್ಲಿ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಒಂದೇ ಓನರ್ ಇರುವಂತಹ ಕೃಷಿ ಜಮೀನಿಗೆ ಹಿಂದಕ್ಕೆ ಮೂರು ಹಾಗೂ ಮುಂದಕ್ಕೆ ಮೂರು ಕಂಬಗಳನ್ನು ಹಾಗೂ ಎರಡು ಕಂಬಗಳನ್ನು ಹಾಕಿ, ಒಂದು ಸ್ಟ್ರಕ್ಚರ್ ಮಾಡಿ, ಅದಕ್ಕೊಂದು ಟ್ರಾನ್ಸ್ಫಾರ್ಮರ್ ಹಾಕಿದ್ದಾರೆ. ಇದೆಲ್ಲವನ್ನು ಸ್ವಯಂ ಕಾರ್ಯ ಯೋಜನೆ ಅಡಿ ಮಾಡಬೇಕಿತ್ತು. ಆದರೆ, ಬೆಸ್ಕಾಂ ಕಂಪನಿಯ ವಿದ್ಯುತ್ ಕಂಬಗಳು ಹಾಗೂ ವೈರ್ಗಳನ್ನು ಬಳಸಿ, ಈ ಕಾಮಗಾರಿ ಮಾಡಲಾಗಿದೆ.
‘
ಎಸ್ಎಸ್ಪಿ ಕಾಮಗಾರಿ ಮಾಡಿಸುವಾಗ ಕಂಬ, ವೈರ್ ಹಾಗೂ ಕೂಲಿ ಕಾರ್ಮಿಕರನ್ನು ಸ್ವತಃ ಅರೇಂಜ್ ಮಾಡಬೇಕು. ಹಣ ಕಟ್ಟಿದ ಮೇಲೆ ಟ್ರಾನ್ಸ್ಫಾರ್ಮ್ ಕೊಡುತ್ತಾರೆ. ಈ ರೀತಿ ಕೊಡುವಾಗ ಎರಡು ಓನರ್, ಎರಡು ಸರ್ವೇ ನಂಬರ್ ಇರಬೇಕು. ಆದರೆ, ಒಬ್ಬರಿಗೆ ನೀಡಿದ್ದರಿಂದ ಅಕ್ರಮದ ವಾಸನೆ ಮೂಗಿಗೆ ಬಡಿದಿತ್ತು. ಅಂತಿಮವಾಗಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.





