ಜಿಡಿಪಿ ಇಳಿಯದಂತೆ ಸರ್ಕಸ್, ಅಗತ್ಯ ವಸ್ತುಗಳ ಜತೆಗೆ ಚಿನ್ನ, ಬೆಳ್ಳಿ ಬೆಲೆ ಏರಿಕೆ, ಅಮೆರಿಕದ ತೆರಿಗೆ ನೀತಿಯಿಂದ ಉಂಟಾಗಿರುವ ಜಾಗತಿಕ ವಿಪ್ಲವ, ಹಣದುಬ್ಬರಕ್ಕೆ ಅಂಕೆ ಹಾಕುವಂತಹ ಗಂಭೀರ ಸವಾಲುಗಳ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ( ಫೆ.01) ದಾಖಲೆಯ 9ನೇ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಶಿಸ್ತಿಗೆ ಚ್ಯುತಿ ಬಾರದಂತೆ ಸಮತೋಲಿತ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆ ನಿರ್ಮಲಾ ಬೆನ್ನಿಗೇರಿದೆ. ಹೀಗಾಗಿ, ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ ಸಿಗಲಿದೆ? ಜನ ಸಾಮಾನ್ಯರ ಆರ್ಥಿಕ ಹೊರೆ ಇಳಿಯುತ್ತಾ? ಮಹಿಳೆಯರಿಗಾಗಿಯೇ ಬಂಪರ್ ಘೋಷಣೆ ಇರುತ್ತಾ? ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಯಾವ ಕೊಡುಗೆ ಸಿಗಲಿದೆ? ರೈತರು ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಬಜೆಟ್ ಉತ್ತೇಜನ ನೀಡುತ್ತಾ? ತೆರಿಗೆ ವ್ಯವಸ್ಥೆ ಇನ್ನಷ್ಟು ಸರಳವಾಗುತ್ತಾ? ಯಾವುದು ಅಗ್ಗವಾಗಲಿದೆ ಮತ್ತು ತುಟ್ಟಿಯಾಗಲಿದೆ?… ಬಜೆಟ್ ಕುರಿತ ಕ್ಷಣದ ಕ್ಷಣದ ಮಾಹಿತಿಯನ್ನು ತಿಳಿದುಕೊಳ್ಳಲು ಗ್ರೇಟರ್ ಬೆಂಗಳೂರು ನ್ಯೂಸ್ 9 ಫಾಲೋ ಮಾಡಿ.


