BBMP
Loading ...

Robbery

Greater Bengaluru News9 : ನಗರದಲ್ಲಿ ಎಟಿಎಂಗೆ ತುಂಬಲು ಕೊಂಡೊಯ್ಯುತ್ತಿದ್ದಂತ ವಾಹನ ತಡೆದು ಆರ್ ಬಿ ಐ ಅಧಿಕಾರಿಗಳು ಎಂಬುದಾಗಿ ಹೇಳಿಕೊಂಡು ಹಾಡ ಹಗಲೇ 7.11 ಕೋಟಿ ಹಣವನ್ನು ದರೋಡೆ ಮಾಡಲಾಗಿತ್ತು. ಈ ಕೃತ್ಯದ ಕಿಂಗ್ ಪಿನ್ ಕಾನ್ಸ್ ಟೇಬಲ್ ಒಪ್ಪರಾಗಿದ್ದರು. ಅವರನ್ನು ಅಮಾನತುಗೊಳಿಸಿ ಡಿಸಿಪಿ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಆದೇಶ ಮಾಡಿದ್ದಾರೆ.

ಅಮಾನತುಗೊಂಡ ಪೊಲೀಸ್ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ಗೋವಿಂದಪುರ ಠಾಣೆಯ ಪೇದೆಯಾಗಿದ್ದಾರೆ. ಇಂತಹ ಇವರು ಬೆಂಗಳೂರಿನ ಹಾಡ ಹಗಲೇ ನಡೆದಿದ್ದಂತ ದರೋಡೆ ಕೃತ್ಯದ ಪ್ರಮುಖ ಆರೋಪಿಯಾಗಿದ್ದರು.

Leave a Reply

Your email address will not be published. Required fields are marked *