BBMP
Loading ...

Loka Police

ಬೆಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ದೂರುಗಳನ್ನು ಹೊತ್ತು ಠಾಣೆಗೆ ಬರುವ ಸಂತ್ರಸ್ತರಿಗೆ ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ’- ಇವು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಕಿಡಿ ನುಡಿಗಳು.

ಪೊಲೀಸ್‌ ಠಾಣೆಗಳಲ್ಲಿ,ಕಾಸು ಕೊಟ್ಟರೆ ಮಾತ್ರ ಕೆಲಸ ಎಂಬ ಆರೋಪಗಳಿಗೆ ನಿದರ್ಶನ ಎಂಬಂತೆ ಕಳೆದ ಎಂಟು ತಿಂಗಳಲ್ಲಿನ್ಯಾಯ ಕೇಳಿ ಠಾಣೆ ಮೆಟ್ಟಿಲು ಹತ್ತಿದವರ ಬಳಿಯೇ ಲಕ್ಷಗಟ್ಟಲೆ ಲಂಚ ಪಡೆದ ಎಸಿಪಿ ಸೇರಿ 10ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸ್‌ ಠಾಣೆಗಳಲ್ಲಿಮಿತಿ ಮೀರಿದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ನ್ಯಾಯಾಲಯಗಳು ಹಲವು ಬಾರಿ ತಪರಾಕಿ ಹಾಕಿದರೂ ಸುಧಾರಣೆ ಮಾತ್ರ ಮರೀಚಿಕೆಯಾಗಿದೆ.

ಸಿವಿಲ್‌ ವ್ಯಾಜ್ಯದಲ್ಲಿಹಸ್ತಕ್ಷೇಪ, ಕ್ರಿಮಿನಲ್‌ ಪ್ರಕರಣದಲ್ಲಿ’ಬಿ’ ರಿಪೋರ್ಟ್‌ ಸಲ್ಲಿಸಲು ಲಂಚ ಹಾಗೂ ದೂರು ದಾಖಲಿಸಿ ತನಿಖೆ ನಡೆಸಲು ಹಣಕ್ಕೆ ಬೇಡಿಕೆ ಸೇರಿದಂತೆ ಹತ್ತಾರು ಕಾರಣಗಳಿಂದ ಹಲವು ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಪ್ರತಿ ತಿಂಗಳು ನಗರ ವ್ಯಾಪ್ತಿಯಲ್ಲಿಒಬ್ಬ ಪೊಲೀಸ್‌ ಅಧಿಕಾರಿಯಾದರೂ ಲಂಚದ ಉರುಳಿನಲ್ಲಿಬಂಧನವಾಗಿ ಜೈಲು ಸೇರುತ್ತಿದ್ದಾರೆ. ಕೆಲ ಪೊಲೀಸರು ಲೋಕಾಯುಕ್ತ ಟ್ರ್ಯಾಪ್‌ನಿಂದ ತಪ್ಪಿಸಿಕೊಂಡರೂ ಅಂಥವರ ವಿರುದ್ಧವೂ ಲೋಕಾಯುಕ್ತದಲ್ಲಿಕ್ರಿಮಿನಲ್‌ ಕೇಸ್‌ ದಾಖಲಾಗಿ ತನಿಖೆ ನಡೆಯುತ್ತಿದೆ.(ಲೋಕಾಯುಕ್ತದಲ್ಲಿ ಭ್ರಷ್ಟಾಚಾರ?)

ಭ್ರಷ್ಟಾಚಾರ ಕ್ರೂರ ಅಪರಾಧಂತೆ
ಈ ನಡುವೆ, ಇತ್ತೀಚೆಗಷ್ಟೇ ಗಂಡ-ಹೆಂಡತಿ ಜಗಳದಲ್ಲಿಯೂ 1 ಲಕ್ಷ ರೂ.ಲಂಚ ಪಡೆದು ಜೈಲು ಸೇರಿದ್ದ ರಾಮಮೂರ್ತಿ ನಗರ ಠಾಣೆಯ ಇನ್ಸ್‌ಪೆಕ್ಟರ್‌ ಎನ್‌.ಎಚ್‌. ರಾಜಶೇಖರ್‌, ಪಿಎಸ್‌ಐ ರುಮಾನ್‌ ಪಾಶಾ ಹಾಗೂ ಮಧ್ಯವರ್ತಿ ಇಮ್ರಾನ್‌ಗೆ ಜಾಮೀನು ನೀಡಲು ನಿರಾಕರಿಸಿರುವ ಲೋಕಾಯುಕ್ತ ನ್ಯಾಯಾಲಯ, ಪೊಲೀಸ್‌ ಠಾಣೆಗಳ ಭ್ರಷ್ಟಾಚಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

”ಭ್ರಷ್ಟಾಚಾರ ಎಂಬುದು ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿಸಾಗುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಭ್ರಷ್ಟಾಚಾರ ಎಂಬುದು ಕ್ರೂರ ಅಪರಾಧಕ್ಕೆ ಕಡಿಮೆ ಏನಲ್ಲ, ಈ ಪಿಡುಗನ್ನು ಹಿಮ್ಮೆಟ್ಟಿಸಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

”ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸರಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುವ ಸಲುವಾಗಿಯೇ ಮಧ್ಯವರ್ತಿಗಳನ್ನು ನೇಮಕ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಮಧ್ಯವರ್ತಿಗಳು, ಸರಕಾರಿ ಅಧಿಕಾರಿಗಳ ಪರವಾಗಿ ಜನಸಾಮಾನ್ಯರಿಂದ ಲಂಚ ಪಡೆಯುತ್ತಿದ್ದಾರೆ. ಈ ಅಕ್ರಮ ನಿರಂತರವಾಗಿ ನಡೆಯುತ್ತಿದೆ” ಎಂದು ನ್ಯಾಯಾಲಯ ತಿಳಿಸಿದೆ.

ಅಷ್ಟೇ ಅಲ್ಲದೆ, ಲಂಚ ಪಡೆದು ಬಂಧನವಾಗಿರುವ ಪೊಲೀಸ್‌ ಅಧಿಕಾರಿಗಳು ಪ್ರಭಾವಿಗಳಾಗಿದ್ದು, ಜಾಮೀನು ನೀಡಿದರೆ ಸಾಕ್ಷ್ಯಾಧಾರಗಳನ್ನು ತಿರುಚುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲಎಂದಿರುವ ನ್ಯಾಯಾಲಯ, ಮೂವರಿಗೂ ಜಾಮೀನು ನೀಡಲು ನಿಧಿರಾಧಿಕಧಿರಿಸಿದೆ.

ಪೋಸ್ಟಿಂಗ್‌ಗೆ ಕಾಸು ಕೊಟ್ಟು, ವಸೂಲಿ ಮಾಡಬೇಡಿ
ಇತ್ತೀಚಿನ ದಿನಗಳಲ್ಲಿ’ಕಾಸು ಕೊಟ್ಟು ಪೋಸ್ಟಿಂಗ್‌ ಪಡೆದಿದ್ದು, ಅಧಿಕಾರ ಪಡೆದು ಅಧಿದನ್ನು ವಾಪಸ್‌ ಪಡೆದುಕೊಳ್ಳುತ್ತೇವೆ’ ಎಂಬ ಹುಂಬ ಸಮರ್ಥನೆಯನ್ನು ಪೊಲೀಸರು ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ’ ಎಂದು ಮತ್ತೊಂದು ಪ್ರಕರಣದಲ್ಲಿನ್ಯಾಯಾಲಯ ಅಭಿಪ್ರಾಯ ವ್ಯಧಿಕ್ತಧಿಪಧಿಡಿಧಿಸಿಧಿತ್ತು.

ಪ್ರಕರಣವೊಂದರಲ್ಲಿ’ಬಿ’ ರಿಪೋರ್ಟ್‌ ಸಲ್ಲಿಸಲು 1.25 ಲಕ್ಷ ರೂ. ಲಂಚ ಪಡೆದು ಬಂಧಿತರಾಗಿದ್ದ ಗೋವಿಂದಪುರ ಠಾಣೆ ಮಹಿಳಾ ಪಿಎಸ್‌ಐ ಜೆ.ಕೆ. ಸಾವಿತ್ರಿ ಬಾಯಿ ಅವರಿಗೆ ಜಾಮೀನು ನಿರಾಕರಿಸಿದ್ದ ನ್ಯಾಯಾಲಯ, ಪೊಲೀಸರ ಮೇಲೆ ಜನರಿಗೆ ಕುಸಿಯುತ್ತಿರುವ ನಂಬಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಪೊಲೀಸ್‌ ಠಾಣೆಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದಿಂದ ಪೊಲೀಸರ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಕುಸಿಯುತ್ತಿದೆ. ಅಪರಾಧಗಳಿಗೆ ಕಡಿವಾಣ ಹಾಕಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕಿರುವ ಪೊಲೀಸರು, ಭ್ರಷ್ಟಾಚಾರದಲ್ಲಿತೊಡಗಿರುವುದು ಒಪ್ಪುವ ವಿಚಾರವಲ್ಲ” ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು.

ಲೋಕಾ ಬಲೆಗೆ ಬಿದ್ದ ಪೊಲೀಸರು

  • 2025 ಜ.4: 50 ಸಾವಿರ ರೂ.ಲಂಚ ಸ್ವೀಕಾರ- ಸಂಜಯನಗರ ಎಎಸ್‌ಐ ವಿಜಯ್‌ಕುಮಾರ್‌ ಹಾಗೂ ಮಧ್ಯವರ್ತಿ
  • ಫೆ. 21 : 25 ಸಾವಿರ ರೂ.ಲಂಚ ಸ್ವೀಕಾರ: ಡಿಸಿಆರ್‌ಇ ಪೊಲೀಸ್‌ ಇನ್ಸ್‌ಪೆಕ್ಟರ್‌ ಗೀತಾ ಹಾಗೂ ಮಧ್ಯವರ್ತಿ
  • ಮಾ.26: 2 ಲಕ್ಷ ರೂ.ಲಂಚ ಸ್ವೀಕಾರ: ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಎಸಿಪಿ ಎಸ್‌.ಆರ್‌ ತನ್ವೀರ್‌, ಎಎಸ್‌ಐ ಕೃಷ್ಣಮೂರ್ತಿ
  • ಮೇ 6 : 1 ಲಕ್ಷ ರೂ.ಲಂಚ ಸ್ವೀಕಾರ: ಕೆಂಪೇಗೌಡ ನಗರ ಇನ್ಸ್‌ಪೆಕ್ಟರ್‌ ಶಿವಾಜಿರಾವ್‌, ಪಿಎಸ್‌ಐ ಶಿವಾನಂದ್‌
  • ಜುಲೈ 21: 1.25 ಲಕ್ಷ ರೂ.ಲಂಚ ಸ್ವೀಕಾರ: ಗೋವಿಂದಪುರ ಠಾಣೆ ಪಿಎಸ್‌ಐ ಜೆ.ಕೆ. ಸಾವಿತ್ರಿಬಾಯಿ
  • ಆ.16: 1 ಲಕ್ಷ ರೂ.ಲಂಚ ಪಡೆದ ರಾಮಮೂರ್ತಿನಗರ ಇನ್ಸ್‌ಪೆಕ್ಟರ್‌ ರಾಜಶೇಖರ್‌ ಹಾಗೂ ಪಿಎಸ್‌ಐ ರುಮಾನ್‌ ಪಾಶಾ
  • ಲಂಚ ಬೇಡಿಕೆ ಸಂಬಂಧ ಅನ್ನಪೂಣೇಶ್ವರಿನಗರ ಇನ್ಸ್‌ಪೆಕ್ಟರ್‌ ಹಾಗೂ ಬೇರೆ ಠಾಣೆಗಳ ಇಬ್ಬರ ಪಿಎಸ್‌ಐಗಳ ವಿರುದ್ಧ ಕೇಸ್‌ ದಾಖಲಾಗಿದೆ.

Leave a Reply

Your email address will not be published. Required fields are marked *