Greater Bengaluru news9: ಭೂಗಳ್ಳರೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಿ ಜಮೀನು ಕಬಳಿಸಲು ಸಹಕರಿಸಿರುವ ಆನೇಕಲ್ ತಾಲೂಕಿನ ಅಭಿಲೇಖಾಲಯ (ದಾಖಲೆಗಳ ಕೊಠಡಿ) ಕಾರ್ಯಾಲಯದ 16 ಮಂದಿ ನೌಕರರ ವಿಧಿರುಧಿದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಡತಗಳು, ದರಖಾಸ್ತು ವಹಿ, ಸಾಗುವಳಿ ಚೀಟಿಗಳು, ಸಾಗುವಳಿ ಚೀಟಿ ವಿತರಣಾ ವಹಿ, ಮಂಜೂರಿ ನಡವಳಿ ವಹಿ, ಇನಾಂ ಡಿಸಿ ಆದೇಶದ ಕಡತಗಳು, ಭೂಸುಧಾರಣೆಯ ಮೂಲ ಕಡತಗಳು, ಐಎಲ್ಆರ್ಆರ್ ವಹಿಗಳು, ಖೇತುವಾರು, ಸೂಡು ಪಹಣಿಗಳು, ಕೈಬರಹ ಪಹಣಿಗಳು ಹಾಗೂ ಇತರೆ ದಾಖಲೆಗಳಲ್ಲಿನಕಲಿ ದಾಖಲಾತಿಗಳನ್ನು ಸೇರಿಸಿ ಭೂಗಳ್ಳರು ಸರಕಾರಿ ಜಮೀನು ಕಬಳಿಸಲು ಸಹಕರಿಸಿರುವುದು ಭೂಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಸಂದರ್ಭದಲ್ಲಿಕಂಡು ಬಂದಿದೆ ಎಂದು ಆನೇಕಲ್ ತಾಲೂಕಿನ ತಹಶೀಲ್ದಾರ್ ವರದಿ ನೀಡಿದ್ದರು.
ಈ ಕುರಿತು ಪರಿಶೀಲಿಸಿದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ, ಕಳೆದ 5 ವರ್ಷಗಳ ಹಿಂದಿನಿಂದ ಅಭಿಲೇಖಾಲಯದಲ್ಲಿಕಾರ್ಯ ನಿರ್ವಹಿಸಿದ 16 ಮಂದಿ ನೌಕರರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗಿದೆ. ನಕಲಿ ದಾಖಲೆಗಳ ಸೃಷ್ಟಿಗೆ ಖಾಸಗಿ ವ್ಯಕ್ತಿಗಳೊಂದಿಗೆ ಸಹಕರಿಸಿರುವ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸುವ ವ್ಯವಸ್ಥಿತ ಗುಂಪುಗಳ ವಿರುದ್ಧವೂ ವಿಚಾರಣೆ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ತಹಶೀಲ್ದಾರ್ಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸರಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ, ಖಾತೆ ಮಾಡಿಕೊಡುವ ಸಂದರ್ಭದಲ್ಲಿತಮ್ಮ ಅನುಮತಿ ಪಡೆಯಬೇಕೆಂದು ಎಲ್ಲ ವಿಶೇಷ ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ. ಆನೇಕಲ್ ತಾಲೂಕಿನಲ್ಲಿ ಸರಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ, ಮ್ಯುಟೇಷನ್ಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ,” ಎಂದು ಹೇಳಿದ್ದಾರೆ.
ಆರೋಪಿತ ನೌಕರರು ಭೂಸುರಕ್ಷಾ ಯೋಜನೆ ಪ್ರಾರಂಭವಾದ ದಿನದಿಂದ ಪ್ರತಿ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರಗಳ ರಜೆಯ ಮುನ್ನಾ ದಿನಗಳಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ರೆಕಾರ್ಡ್ ಆಗದಂತೆ ಮಾಡಿ, ನಂತರ ತಮ್ಮ ಅಕ್ರಮ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಆರೋಪಿತ ನೌಕರರ ವಿವರ:
ಎಂ.ಮಹೇಶ್, ಪ್ರಥಮ ದರ್ಜೆ ಸಹಾಯಕ
ಮಂಜುಳಮ್ಮ, ಗ್ರಾಮ ಸಹಾಯಕಿ, ಎಸ್.ಮೇಡಹಳ್ಳಿ
ಮೀನಾಕ್ಷಿ, ಗ್ರಾಮ ಸಹಾಯಕಿ, ಚಂದಾಪುರ ಗ್ರಾಮ
ಮಾರುತಿ ಪ್ರಸಾದ್ (ಪ್ರಭಾರ ತಹಶೀಲ್ದಾರ್ ಗ್ರೇಡ್-2)
ಬಿ.ಕೆ.ಚಂದ್ರಶೇಖರ, ಉಪ ತಹಶೀಲ್ದಾರ್, ಜಿಗಣಿ ಹೋಬಳಿ (ಪ್ರಭಾರ ತಹಶೀಲ್ದಾರ್ ಗ್ರೇಡ್-2)
ಜೆ.ಮಂಗಳಾ, ಎಫ್ಡಿಎ
ಜಿ.ದಿನಕರನ್, ಶಿರಸ್ತೇದಾರ್
ಕೆ.ರಾಘವೇಂದ್ರ, ಎಸ್ಡಿಎ
ನಾರಾಯಣ, ಎಫ್ಡಿಎ
ಎಸ್.ಲೋಕಶ್, ಶಿರಸ್ತೇದಾರ್
ಪಿ.ಕಲ್ಪನಾ, ‘ಡಿ’ ಗ್ರೂಪ್
ಮಂಜುನಾಥ, ‘ಡಿ’ ಗ್ರೂಪ್
ಎನ್.ಶೋಭಾ, ಗ್ರಾಮ ಸಹಾಯಕಿ, ಬಳ್ಳೂರು ವೃತ್ತ
ಪ್ರವೀಣ್, ಗ್ರಾಮ ಸಹಾಯಕ, ಮುತ್ತಾನಲ್ಲೂರು ವೃತ್ತ
ಮುನಿರಾಜು, ಗ್ರಾಮ ಸಹಾಯಕ, ಬ್ಯಾಗಡದೇನಹಳ್ಳಿ ವೃತ್ತ
ಎಂ.ವಿ.ಮಂಜುನಾಥ್, ಎಸ್ಡಿಎ


