BBMP
Loading ...

DKS

ಬೆಂಗಳೂರು: ವಿಧಾನಸಭೆಯಲ್ಲಿ ಮಂಗಳವಾರ ಇ-ಖಾತಾ ಅವ್ಯವಸ್ಥೆ , ಒಸಿ ಮತ್ತು ಸಿ.ಸಿ. ಪ್ರಮಾಣಪತ್ರ ಹಾಗೂ ವಲಯ ನಿಯಮಾವಳಿಗಳ ಮಾರ್ಪಾಡು ಕುರಿತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿ ಗಣೇಶ್ ರವರು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಇ ಖಾತಾ ಅಂತ ಮಾಡಿದ್ದಾರೆ ಅದರಿಂದ ಜನರು ಎಷ್ಟು ಕಷ್ಟ ಅನುಭವಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸರ್ಕಾರಕ್ಕೂ ಇದು ತಿಳಿದಿದೆ. ಅಲ್ಲದೆ, ವಿದ್ಯುತ್​ ಸಂಪರ್ಕ ಕೂಡ ನೀಡುತ್ತಿಲ್ಲ. ಒಸಿ, ಸಿಸಿ ಮತ್ತು ಇ ಖಾತಾ ಅವ್ಯವಸ್ಥೆ ಬಗೆಹರಿಸದಿದ್ದರೆ ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಾರೆ ಎಂದು ಜ್ಯೋತಿ ಗಣೇಶ್​ ಹೇಳಿದರು.

ನಮಗೆ ಸುಪ್ರೀಂ ಕೋರ್ಟ್​ ಆದೇಶ ಗೊತ್ತಿದೆ. ಬೇಕಿದ್ದರೆ ಸಮೀಕ್ಷೆ ಮಾಡಿಸಿ, ಏನಾದರೂ ಮಾಡಿ ಜನರಿಗೆ ಒಂದು ವಿನಾಯಿತಿ ನೀಡಿ. ಜನರೆಲ್ಲ ಶಾಪ ಹಾಕುತ್ತಿದ್ದಾರೆ. 30 x 40 ಸೈಟ್​ಗೂ ಕರೆಂಟ್​ ಕೊಡ್ಲಿಲ್ಲ ಅಂದ್ರೆ ಹೇಗೆ ಸರ್​? ಏನಾದರೂ ವಿನಾಯಿತಿ ಕೊಡಿ ಎಂದು ಕೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಮುನಿರತ್ನ ಮಾತನಾಡಿ, ಒಸಿ, ಸಿಸಿ ಇಲ್ಲದೇ ನಾಲ್ಕು ಲಕ್ಷ ಕುಟುಂಬಗಳು ಇಂದು ಸಂಕಷ್ಟದಲ್ಲಿ ಸಿಲುಕಿವೆ ಎಂದರು. ಶಾಸಕ ಹಾಗೂ ಮಾಜಿ ಡಿಸಿಎಂ ಅಶ್ವಥ್​ ನಾರಾಯಣ್​ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸದನದಲ್ಲಿ ಒಸಿ, ಸಿಸಿ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು.

ಬಿಜೆಪಿ ನಾಯಕರ ಹೇಳಿಕೆಗೆ ಉತ್ತರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​, ಬೆಂಗಳೂರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಅನಧಿಕೃತವಾಗಿ ನಿರ್ಮಿಸಿರುವ ಸಣ್ಣ ವಿಸ್ತೀರ್ಣದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಲು ಸರ್ಕಾರ ಚಿಂತಿಸುತ್ತಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸದನದಲ್ಲಿ ನಡೆದ ಸಂಪೂರ್ಣ ಚರ್ಚೆಯ ವಿಡಿಯೋ ಇಲ್ಲಿದೆ….

Leave a Reply

Your email address will not be published. Required fields are marked *