BBMP
Loading ...

ಬೆಂಗಳೂರು : ಬೆಂಗಳೂರಿನ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಇತಿಹಾಸ ಪ್ರಸಿದ್ದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಇಂದು ದೇಗುಲದ ಖಜಾನೆ ಸೀಜ್ ಮಾಡಲಾಗಿದೆ. ಅಲ್ಲದೇ ಲಾಕರ್ ಗೆ ನೋಟಿಸ್ ಅಂಟಿಸಿ ಬಂದ್ ಮಾಡಿ ಅಧಿಕಾರಿಗಳು ತೆರಳಿದ್ದಾರೆ.

ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಖಜಾನೆ, ಲಾಕರ್ ತೆರೆಯುವಂತಿಲ್ಲ. ಈಗಾಗಲೇ ದೇಗುಲದಲ್ಲಿ ಸರ್ಕಾರಿ ಸಿಬ್ಬಂದಿ ಕಾರ್ಯನಿರ್ವಹಣೆ ಕೂಡ ಆರಂಭವಾಗಿದೆ. ವಿರೋಧದ ನಡುವೆಯೂ ಗಾಳಿ ಆಂಜನೇಯ ಸ್ವಾಮಿ ದೇಗುಲ ಈ ಮೂಲಕ ಅಧಿಕೃತವಾಗಿ ಮುಜರಾಯಿ ಇಲಾಖೆಯ ಸುಪರ್ದಿಗೆ ಬಂದಂತಾಗಿದೆ.

ದೇಗುಲ ಸುಪರ್ದಿಗೆ ವಿರೋಧಿಸಿ ಸಭೆಗೆ ತೀರ್ಮಾನಿಸಲಾಗಿದ್ದು, ದೇಗುಲದ ಆಡಳಿತ ಮಂಡಳಿಯಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಒಂದು ಕಾನೂನು ಹೋರಾಟಕ್ಕೆ ಸ್ಥಳೀಯ ಭಕ್ತರು ಕೂಡ ಸಾತ್ ನೀಡಿದ್ದಾರೆ. ಸೋಮವಾರ ಸರ್ಕಾರದ ವಿರುದ್ಧ ಬೃಹತ್ ಸಭೆ ನಡೆಸಲು ದೇಗುಲದ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ದೇವರ ಕೆಲಸ, ದುಡ್ಡಲ್ಲಿ ಮೋಸ, ವಂಚನೆ ಇರಬಾರದು: ಗಾಳಿ ಆಂಜನೇಯಸ್ವಾಮಿ ಭಕ್ತರ ಆಕ್ರೋಶ

Leave a Reply

Your email address will not be published. Required fields are marked *