BBMP
Loading ...

Electricity

ಬೆಂಗಳೂರು: ಪ್ರತಿವರ್ಷ ಅದರಲ್ಲೂ ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣಗಳೇನು ಎಂದು ನೋಡಿದರೆ ಅಸಮರ್ಪಕ ಕಡಿಮೆ ವೋಲ್ಟೇಜ್ ಅಳವಡಿಕೆಗಳು, ಬಹುಮಹಡಿ ಸರ್ಕಾರಿ ಕಟ್ಟಡಗಳಲ್ಲಿ ಕಳಪೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆಗಳು ಮತ್ತು ಅಕ್ರಮವಾಗಿ ವಿದ್ಯುತ್ ಪಡೆಯುವುದು ಎಂದು ಕರ್ನಾಟಕದ ಮುಖ್ಯ ವಿದ್ಯುತ್ ನಿರೀಕ್ಷಕ ಟಿ.ಎನ್. ಅಪ್ಪಚು ಹೇಳುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯುಂಟಾಗುವುದು ಹಸಿರು ಇಂಧನ ಮೂಲಗಳಿಂದ ಹೊಸ ಯುಗದ ವಿದ್ಯುತ್ ಉತ್ಪಾದನೆ ಮತ್ತು ಬ್ಯಾಟರಿಗಳಲ್ಲಿ ಸಂಗ್ರಹಣೆ.

ರಾಜ್ಯ ಇಂಧನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅಪ್ಪಚ್ಚು, ವಿದ್ಯುತ್ ನ ಅಸಮರ್ಪಕ ಬಳಕೆಯಿಂದ ಹೆಚ್ಚುತ್ತಿರುವ ಅಪಘಾತಗಳ ಕುರಿತು ಜಾಗೃತಿ ಮೂಡಿಸಲು ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಈ ವರ್ಷದ ಧ್ಯೇಯವಾಕ್ಯ ‘ಸ್ಮಾರ್ಟ್ ಎನರ್ಜಿ, ಸೇಫ್ ನೇಶನ್’. ಹೊಸ ಯುಗದ ವಿದ್ಯುತ್ ಉತ್ಪಾದನಾ ಪರಿಕಲ್ಪನೆಗಳನ್ನು ಉಲ್ಲೇಖಿಸಿ, ಕೇಂದ್ರವು ಸುರಕ್ಷತಾ ಕ್ರಮಗಳ ಬಗ್ಗೆಯೂ ಕಾರ್ಯನಿರ್ವಹಿಸುತ್ತಿದೆ, ವಿಶೇಷ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಹೇಳಿದರು.

ಮತ್ತೊಂದು ಕಳವಳವೆಂದರೆ, ರೈತರು ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸಿ ಐಪಿ ಸೆಟ್‌ಗಳನ್ನು ಅಳವಡಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ರೈತರು ಆಕಸ್ಮಿಕವಾಗಿ ಲೈವ್ ತಂತಿಗಳ ಸಂಪರ್ಕಕ್ಕೆ ಬರುತ್ತಾರೆ, ಇದು ದುರಂತಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಎಸ್ಕಾಂಗಳು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಹಳ್ಳಿಗಳಲ್ಲೂ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ; ಬೆಸ್ಕಾಂ ಆದೇಶ

Leave a Reply

Your email address will not be published. Required fields are marked *