BBMP
Loading ...

DVG BESCOM

ದಾವಣಗೆರೆ: ರೈತರಿಂದ ಯಾವುದೇ ಲಂಚ ಸ್ವೀಕರಿಸದೆ ಕೆಲಸ ಮಾಡಿಕೊಡುತ್ತೇವೆ ಎಂಬುದಾಗಿ ಬೆಸ್ಕಾಂ ಇಂಜಿನಿಯರ್ ಗಳು ದೇವಸ್ಥಾನದಲ್ಲಿ ಪ್ರಮಾಣ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಗುರುವಾರ (ಮಾ.30) ನಡೆದಿದೆ.

ರಾಜ್ಯ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ- ಸಕ್ರಮ ಯೋಜನೆಯ ಕೆಲಸ ಮಾಡಿಕೊಡಲು ಸೆಕ್ಷನ್ ಆಫೀಸರ್ ಗಳು ರೈತರಿಂದ ‌ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಹಾಗಾಗಿ ಬೆಸ್ಕಾಂ ಎಇಇ ನಾಗರಾಜ್, ಸಂತೇ ಬೆನ್ಮೂರಿನ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಎಲ್ಲಾ ಐದು ಜನ ಸೆಕ್ಷನ್ ಆಫೀಸರ್ ಗಳ ಕರೆಸಿ, ದೇವರ ಮುಂದೆ ರೈತರಿಂದ ಲಂಚ ಸ್ವೀಕರಿಸಲ್ಲ ಎಂಬ ಪ್ರಮಾಣ ಮಾಡಿಸಿದ್ದಾರೆ.

ಹನಿಟ್ರ್ಯಾಪ್​ ವಿಚಾರಕ್ಕೆ ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ: ತನಿಖೆಗೆ ಆಗ್ರಹ

Leave a Reply

Your email address will not be published. Required fields are marked *