BBMP
Loading ...

Vidhanasoudha

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಈ ಕೆಳಕಂಡ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಲಾಗಿದೆ ಎಂದಿದ್ದಾರೆ.

ಹೀಗಿದೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರು, ಸದಸ್ಯರ ಪಟ್ಟಿ

  • ಕನ್ನಡ ಮತ್ತು ಸಂಸ್ಕೃತಿ ಸಚಿವರು, ಅಧ್ಯಕ್ಷರು
  • ಡಾ.ಸಿಎಸ್ ದ್ವಾರಕನಾಥ್, ಸದಸ್ಯರು
  • ರವಿಕುಮಾರ್, ಮಾಜಿ ಮುಖ್ಯ ಕಾರ್ಯದರ್ಶಿ, ಸದಸ್ಯರು
  • ಸದಾಶಿವ ಮರ್ಜಿ, ಧಾರವಾಡ, ಸದಸ್ಯರು
  • ಬಾಬು ಭಂಡಾರಿಗಲ್, ರಾಯಚೂರು, ಸದಸ್ಯರು
  • ಶೈಲಜಾ ಹಿರೇಮಠ, ಕೊಪ್ಪಳ, ಸದಸ್ಯರು
  • ರಂಜಾನ್ ದರ್ಗಾ, ಗುಲ್ಬರ್ಗಾ, ಸದಸ್ಯರು
  • ವೈಸಿ ಭಾನುಮತಿ, ಮೈಸೂರು, ಸದಸ್ಯರು
  • ಪ್ರೊ ಜಿ ಶರಣಪ್ಪ, ಚಿತ್ರದುರ್ಗ, ಸದಸ್ಯರು
  • ಪ್ರೊ.ದೊಣ್ಣೆಗೌಡರು ವೆಂಕಣ್ಣ, ಯಾದಗಿರಿ, ಸದಸ್ಯರು
  • ಹಿರೇಮಗಳೂರು ಕಣ್ಣನ್, ಸದಸ್ಯರು
  • ಪುಷ್ಪ ಶಿವಕುಮಾರ್, ಶಿಕಾರಿಪುರ, ಸದಸ್ಯರು
  • ಡಾ.ರತ್ನಮ್ಮ, ಚಾಮರಾಜನಗರ, ಸದಸ್ಯರು
  • ಶರಣಪ್ಪ ವಡಿಗೇರಿ, ಕೊಪ್ಪಳ, ಸದಸ್ಯರು
  • ಡಾ.ತಿಮ್ಮಪ್ಪ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ
  • ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ, ವಿಜಯನಗರ, ಸದಸ್ಯರು
  • ಪಂ.ಎಂ ವೆಂಕಟೇಶ್ ಕುಮಾರ್, ಧಾರವಾಡ, ಸದಸ್ಯರು
  • ಡಾ.ಕೆ.ಕುಮಾರ್, ಮೈಸೂರು, ಸದಸ್ಯರು
  • ಸಿ ಬಸವಲಿಂಗಯ್ಯ, ಮೈಸೂರು, ಸದಸ್ಯರು
  • ಪಿ.ತಿಪ್ಪೇಸ್ವಾಮಿ, ಚಿತ್ರದುರ್ಗ, ಸದಸ್ಯರು
  • ಶ್ರೀರಾಮ ಇಟ್ಟಣ್ಣನವರ, ಬೀಳಗಿ, ಸದಸ್ಯರು
  • ಸಿಹಿ ಕಹಿ ಚಂದ್ರು, ಬೆಂಗಳೂರು, ಸದಸ್ಯರು
  • ಜಯಣ್ಣಚಾರ್, ಚಿಕ್ಕಮಗಳೂರು, ಸದಸ್ಯರು
  • ಮಲ್ಲಿಕಾರ್ಜನ ಹೊಸಪಾಳ್ಯ, ತುಮಕೂರು, ಚಿತ್ರದುರ್ಗ
  • ಹೆಚ್.ಕೆ ಶ್ರೀಕಂಡ, ಸದಸ್ಯರು
  • ಸಿ.ಚಂದ್ರಶೇಖರ್, ಬೆಂಗಳೂರು, ಸದಸ್ಯರು
  • ಹಂಸಲೇಖ, ಬೆಂಗಳೂರು, ಸದಸ್ಯರು
  • ರವಿಚಂದ್ರನ್, ಬೆಂಗಳೂರು, ಸದಸ್ಯರು
  • ಪ್ರೊ.ರಾಧಾಕೃಷ್ಣ, ಸದಸ್ಯರು
  • ಪ್ರೊ.ಕೃಷ್ಣೇಗೌಡ, ಮೈಸೂರು, ಸದಸ್ಯರು
  • ಸಿದ್ದರಾಜು, ಬೆಂಗಳೂರು, ಸದಸ್ಯರು
  • ನಾಗೇಶ್ ಹೆಗಡೆ, ಬೆಂಗಳೂರು ಸದಸ್ಯರು
  • ಕೆ.ಚನ್ನಪ್ಪ, ಬಳ್ಳಾರಿ, ಸದಸ್ಯರು
  • ಎ.ಬಿ ಸುಬ್ಬಯ್ಯ, ಕೊಡಗು, ಸದಸ್ಯರು
  • ಜೋಸೆಫ್ ಹೂವರ್, ಬೆಂಗಳೂರು, ಸದಸ್ಯರು

13 ಮಂದಿಯನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಲಾಗಿದೆ.

ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

Leave a Reply

Your email address will not be published. Required fields are marked *